ಸಂಸದರಿಗೆ ಕರ್ನಾಟಕದ ಫ್ಲೇವರ್ ಗಿಫ್ಟ್

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಪ್ರತಿನಿಧಿಗಳಿಗೆ ಕರ್ನಾಟಕ ಫ್ಲೇವರ್ ತಿಂಡಿ ತಿನಿಸು, ಶ್ರೀಗಂಧವನ್ನು ಗೌರವಪೂರ್ವಕವಾಗಿ ನೀಡಲಾಗಿದೆ...
ಬಿಜೆಪಿ ರಾಷ್ಟ್ರೀಯ ಕಾರ್ಯಾಕಾರಿಣಿ ಸಭೆ, ಬೆಂಗಳೂರು
ಬಿಜೆಪಿ ರಾಷ್ಟ್ರೀಯ ಕಾರ್ಯಾಕಾರಿಣಿ ಸಭೆ, ಬೆಂಗಳೂರು

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಪ್ರತಿನಿಧಿಗಳಿಗೆ ಕರ್ನಾಟಕ ಫ್ಲೇವರ್ ತಿಂಡಿ ತಿನಿಸು, ಶ್ರೀಗಂಧವನ್ನು ಗೌರವಪೂರ್ವಕವಾಗಿ ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಟಿ ರವಿ, `ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡ ಪ್ರತಿನಿಧಿಗಳಿಗೆ ಗಿಫ್ಟ್ ಪ್ಯಾಕ್ ಕೊಡಲಾಗಿದೆ.

ಅದರಲ್ಲಿ 8 ಬಗೆಯ ಸಿಹಿ-ಖಾರ ಇಂಡಿ ಇದ್ದು, ಪ್ರಮುಖವಾಗಿ ಕೋಡುಬಳೆ, ಒಬ್ಬಟ್ಟು, ರವೆ ಉಂಡೆ, ಎಳ್ಳುಂಡೆ, ಪುರಿ ಉಂಡೆ, ಶೇಂಗಾ ಉಂಡೆ, ಕೊಬ್ಬರಿ ಮಿಠಾಯಿ, ತೆನವೊಳಲು ಆ ಪ್ಯಾಕ್‍ನಲ್ಲಿತ್ತು. ಇದಲ್ಲದೇ ಮೈಸೂರ್ ಸ್ಯಾಂಡಲ್ ಸೋಪು, ಶ್ರೀಗಂಧದೆಣ್ಣೆ, ಗಂಧದ ಎರಡು ಪೀಸ್, ಒಂದು ಕಲಾಕೃತಿಯ ಮರದ ಪೆಟ್ಟಿಗೆಯನ್ನು ನೀಡಲಾಯಿತು' ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com