ಬಸ್ ನಿರ್ವಾಹಕನ ಮೇಲೆ ಭಜರಂಗಿಗಳ ಹಲ್ಲೆ

ಯುವತಿಯೊಬ್ಬಳು ಟಿಕೆಟ್ ದರ ಕಡಿಮೆ ನೀಡಿದ್ದನ್ನು ವಿಚಾರಿಸಿದ್ದಕ್ಕೆ ಭಜರಂಗ ದಳ ಕಾರ್ಯಕರ್ತರು ಬಸ್ ತಡೆದು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ...
ಬಸ್ ನಿರ್ವಾಹಕ
ಬಸ್ ನಿರ್ವಾಹಕ
Updated on
ಮಂಗಳೂರು: ಯುವತಿಯೊಬ್ಬಳು ಟಿಕೆಟ್ ದರ ಕಡಿಮೆ ನೀಡಿದ್ದನ್ನು ವಿಚಾರಿಸಿದ್ದಕ್ಕೆ ಭಜರಂಗ ದಳ ಕಾರ್ಯಕರ್ತರು ಬಸ್ ತಡೆದು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ಉಳ್ಳಾಲದ ಕುಂಪಲ ಎಂಬಲ್ಲಿ ನಡೆದಿದೆ.
ಯುವತಿಯೊಬ್ಬಳು ಶುಕ್ರವಾರ ಖಾಸಗಿ ಬಸ್ ನಿರ್ವಾಹಕ ಟಿಕೆಟ್ ದರದಲ್ಲಿ ರು.2 ಕಡಿಮೆ ನೀಡಿದ ವಿಷಯದಲ್ಲಿ ಯುವತಿ ಮತ್ತು ನಿರ್ವಾಹಕನ ನಡುವೆ ಮಾತಿನ ಚಕಮಕಿ ನಡೆದಿದೆ. ಶನಿವಾರ ಬೆಳಿಗ್ಗೆ ಯುವತಿ ಕಡೆಯ ಭಜರಂಗದಳದ ಕಾರ್ಯಕರ್ತರಾದ ನವೀನ್ ಮತ್ತು ಶಕ್ತಿ ಎಂಬವರು ಕುಂಪಲ ಬಗಂಬಿಲದಲ್ಲಿ ಬಸ್ಸನ್ನು ಅಡ್ಡಗಟ್ಟಿ ನಿರ್ವಾಹಕ ಮಹೇಶ್‍ಗೆ ಮನಬಂದಂತೆ ಥಳಿಸಿ ಗಾಯಗೊಳಿಸಿದ್ದಾರೆ.
ಶುಕ್ರವಾರಮಂಗಳೂರಿನ ಸ್ಟೇಟ್ ಬ್ಯಾಂಕ್‍ನಿಂದ ಯುವತಿ ಕುಂಪಲ ರೂಟಿನ ಖಾಸಗಿ ಬಸ್‍ನಲ್ಲಿ ಕುಂಪಲ ಕಡೆಗೆ ಪ್ರಯಾಣಿಸಿದ್ದರು. ಈ ವೇಳೆ ಟಿಕೇಟ್ ನೀಡುತ್ತಿದ್ದ ನಿರ್ವಾಹಕ
ಮಹೇಶ್ ಗೆ ರು.10 ನೀಡಿದ್ದಳು. ನಿರ್ವಾಹಕ ಮಹೇಶ್ ಇನ್ನೂ ರು.2 ಆಗಬೇಕು ಎಂದು ಕೇಳಿದಾಗ ಹಣ ಕೊಡಲು ಯುವತಿ ನಿರಾಕರಿಸಿದ್ದಾಳೆ. ಆಗ ಮಹೇಶ್, ಇಷ್ಟೊಂದು ತಗಾದೆ ಏಕೆಂದು ರು.10 ನಿಮ್ಮಲ್ಲೇ ಇರಲಿ ಎಂದು ಯುವತಿಗೆ ಹಿಂದಿರುಗಿಸಿದ್ದರು. ಇದರಿಂದ ಕುಪಿತಗೊಂಡ ಯುವತಿ ದಾರಿ ಮಧ್ಯದಲ್ಲೇ ಬಸ್ ಇಳಿದಿದ್ದಳು. ಆರೋಪಿ ನವೀನ್
ಕುಂಪಲ ರೂಟಿನ ಇನ್ನೊಂದು ಖಾಸಗಿ ಬಸ್‍ನ ಚಾಲಕನಾಗಿದ್ದು, ಶಕ್ತಿ ನಿರ್ವಾಹಕನಾಗಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com