ಉರ್ದು ಪತ್ರಿಕೆ ಸಂಪಾದಕ ಸೆರೆ

ಬೆಳಗಾವಿ ವಿಮಾನ ನಿಲ್ದಾಣದ ಫೋಟೋ ತೆಗೆಯುತ್ತಿದ್ದ ವೇಳೆ ಸೆರೆ ಸಿಕ್ಕ ಮಹ್ಮದ್ ಹುಸೇನ್ ಅಲಿ ಖುರೇಶಿ ನೀಡಿದ ಮಾಹಿತಿಯಂತೆ ಕಲಬುರಗಿಯ ಉರ್ದು ಪತ್ರಿಕೆಯೊಂದರ ಸಂಪಾದಕರನ್ನು ಪೊಲೀಸರು ಬಂಧಿಸಿದ್ದಾರೆ...
ಬೆಳಗಾವಿ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)
ಬೆಳಗಾವಿ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)

ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ಫೋಟೋ ತೆಗೆಯುತ್ತಿದ್ದ ವೇಳೆ ಸೆರೆ ಸಿಕ್ಕ ಮಹ್ಮದ್ ಹುಸೇನ್ ಅಲಿ ಖುರೇಶಿ ನೀಡಿದ ಮಾಹಿತಿಯಂತೆ ಕಲಬುರಗಿಯ ಉರ್ದು ಪತ್ರಿಕೆಯೊಂದರ ಸಂಪಾದಕರನ್ನು ಪೊಲೀಸರು ಬಂಧಿಸಿದ್ದಾರೆ.

ಸಂಪಾದಕರ ಸೂಚನೆ ಮೇರೆಗೆ ತಾನು ವಿಮಾನ ನಿಲ್ದಾಣದ ಫೋಟೋ ತೆಗೆಯುತ್ತಿದ್ದುದಾಗಿ ವಿಚಾರಣೆ ವೇಳೆ ಖುರೇಶಿ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಸಂಪಾದಕ ಏಜಾಜ್ ಸೇಠ್ ಬಂಧನ ನಡೆದಿದೆ. ಖುರೇಶಿ ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಕೆಂಪೇಗೊಡ ರೈಲ್ವೆ ನಿಲ್ದಾಣ, ಪ್ರಮುಖ ವಿವಿಯ, ಜನನಿಬಿಡ ಪ್ರದೇಶಗಳ ಫೋಟೋ ತೆಗೆದಿದ್ದ, ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ, ಐಜಾಜ್ ಸೇಠ್ ಸೂಚನೆಯಂತೆ ಆತ ಈ ಕೆಲಸ ಮಾಡುತ್ತಿದ್ದ ಎನ್ನುವುದು ಈ ವೇಳೆ ಬಹಿರಂಗವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com