ಕೇಂದ್ರ ಹಣಕಾಸು ಇಲಾಖೆಗೆ ನೋಟಿಸ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲೆಕ್ಕ ಪರಿಶೋಧನೆ ಮಾಡಬ ಸಂಬಂಧ ಸಲ್ಲಿಸಿಕೆಯಾಗಿರುವ ಅರ್ಜಿ ಕುರಿತು ಹೈ ಕೋರ್ಟ್ ಕೇಂದ್ರ ಹಣಕಾಸು ಇಲಾಖೆ ಮತ್ತು ಮಹಾಲೇಖಪಾಲಕರಿಗೆ ನೋಟಿಸ್ ಜಾರಿ ಮಾಡಿದೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲೆಕ್ಕ ಪರಿಶೋಧನೆ ಮಾಡಬ ಸಂಬಂಧ ಸಲ್ಲಿಸಿಕೆಯಾಗಿರುವ ಅರ್ಜಿ ಕುರಿತು ಹೈ ಕೋರ್ಟ್ ಕೇಂದ್ರ ಹಣಕಾಸು ಇಲಾಖೆ ಮತ್ತು ಮಹಾಲೇಖಪಾಲಕರಿಗೆ ನೋಟಿಸ್ ಜಾರಿ ಮಾಡಿದೆ.

ನಮ್ಮ ಬೆಂಗಳೂರು ಫೌಂಡೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ  ಮುಖರ್ಜಿ ಮತ್ತು ನ್ಯಾ.ಬಿ.ಮನೋಹರ್ ಅವರಿದ್ದ ನ್ಯಾಯಪೀಠ ನೋಟಿಸ್ ಜಾರಿ ಮಾಡಿದೆ. ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಯ ಲೆಕ್ಕ ಪರಿಶೋಧನೆ ನಡೆಸಿಲ್ಲ. ಇದರಿಂದಾಗಿ ಪಾಲಿಕೆಯಲ್ಲಿನ ಹಣ ಯಾವ ರೀತಿಯಲ್ಲಿ ವೆಚ್ಚವಾಗಿದೆ ಎಂಬುತು ತಿಳಿಯದಂತಾಗಿದೆ. ಆದ್ದರಿಂದ ಲೆಕ್ಕ ಪರಿಶೋಧನೆ ಮಾಡುವಂತೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com