ಸಿಂಧನೂರು: ಮದುವೆ ದಿಬ್ಬಣ ಮುಗಿಸಿಕೊಂಡ ಹಳ್ಳಿಗೆ ವಾಪಸ್ಸಾಗುತ್ತಿದ್ದ ವೇಳೆ ಮ್ಯಾಕ್ಸಿಕ್ಯಾಬ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಮಹಿಳೆಯರು ಮೃತಪಟ್ಟಿರುವ ದಾರುಣ ಘಟನೆ ಸಾಸಲಮರಿ ಬಳಿ ನಡೆದಿದೆ.
ಮೃತ ಜಯಮ್ಮ ಎಂಬುವರ ಮಗಳ ಮದುವೆ ಬಳ್ಳಾರಿಯ ಜಿಲ್ಲೆಯ ಸಿರಗುಪ್ಪದಲ್ಲಿ ನಡೆದಿತ್ತು. ಈ ಮದುವೆ ಮುಗಿಸಿಕೊಂಡು ರಾಯಚೂರು ಜಿಲ್ಲೆಯ ಸಿಂಧನೂರಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆಸಿದೆ.
ಮೃತರನ್ನು ಶಿವಗಂಗಮ್ಮ(60), ಗೌರಮ್ಮ(42) ಮತ್ತು ಮದುಮಗಳ ತಾಯಿ ಜಯಮ್ಮ(47) ಎಂದು ತಿಳಿದುಬಂದಿದೆ.
ಮಂಡ್ಯ: ಮಂಡ್ಯ ಜಿಲ್ಲೆಯ ಬೂದನೂರು ತಾಲೂಕಿನ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗ್ಗೆ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Advertisement