ಮಂತ್ರಿಗಿರಿ ಆಸೆ ಇದ್ದರೆ ಸ್ಪೀಕರ್ ರಾಜೀನಾಮೆ ಕೊಡಲಿ

'ನಿಮ್ಮನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್. ಪ್ರತಿಪಕ್ಷ ಕೆಲಸ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು?...
ಕಾಂಗ್ರೆಸ್ ಮುಖಂಡ ಜನಾರ್ಧನಪೂಜಾರಿ
ಕಾಂಗ್ರೆಸ್ ಮುಖಂಡ ಜನಾರ್ಧನಪೂಜಾರಿ

ಮಂಗಳೂರು: ಸ್ಪೀಕರಾಗಿದ್ದುಕೊಂಡು ಅಧಿಕಾರಿಗಳನ್ನು ನಿಯಂತ್ರಿಸಲಾಗದಿದ್ದರೆ ರಾಜಿನಾಮೆ ಕೊಡಿ. ಪ್ರತಿಪಕ್ಷದ ಕೆಲಸ ಮಾಡಬೇಡಿ ಎಂದು ಕಾಂಗ್ರೆಸ್ ಮುಖಂಡ ಜನಾರ್ಧನಪೂಜಾರಿ, ಸ್ಪೀಕರ್ ಕಾಗೋಡು ತಿಮ್ಮಪ್ಪ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

'ನಿಮ್ಮನ್ನು ಸ್ಪೀಕರ್ ಮಾಡಿದ್ದು ಕಾಂಗ್ರೆಸ್ ಪಕ್ಷ. ಪ್ರತಿಪಕ್ಷ ಕೆಲಸ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು? ಸರ್ಕಾರ ಪತನಗೊಳಿಸಲು ನೀವು ಬಯಸಿದ್ದೀರಾ ಅಥವಾ ಸಚಿವ ಸ್ಥಾನ ಆಕಾಂಕ್ಷಿಯಾಗಿ ಈ ರೀತಿ ಮಾಡುತ್ತಿದ್ದೀರಾ' ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.

ಅನುಭವಿ ರಾಜಕಾರಣಿಯಾಗಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಯುದ್ದಸಾರಿರುವುದು ವಿಪರ್ಯಾಸ. ಕಾಂಗ್ರೆಸ್‌ನಲ್ಲಿದ್ದು ಅಧಿಕಾರ ಅನುಭವಿಸಿದ ಅವರ ಈ ರೀತಿಯ ವರ್ತನೆ ಖಂಡನೀಯ. ಆರೋಗ್ಯ ಸಚಿವರಾಗಿದ್ದಾಗ ಇಲಾಖೆಯ ಸಮಸ್ಯೆಗಳನ್ನೇ ಅವರಿಂದ ಬಗೆಹರಿಸಲಾಗಿಲ್ಲ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com