ಉಪ್ಪಿನಂಗಡಿ ಮತ್ತೆ ಉದ್ವಿಗ್ನ: 4 ಅಂಗಡಿಗಳಿಗೆ ಬೆಂಕಿ

ಇಲ್ಲಿ 700 ಮಂದಿ ಹೆಚ್ಚುವರಿ ಪೊಲೀಸ್ ತುಕುಡಿಯನ್ನಿರಿಸಿ ಪೊಲೀಸ್ ಭದ್ರತೆ ನೀಡಿದ್ದರೂ ಶನಿವಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಉಪ್ಪಿನಂಗಡಿ: ಇಲ್ಲಿ 700 ಮಂದಿ ಹೆಚ್ಚುವರಿ ಪೊಲೀಸ್ ತುಕುಡಿಯನ್ನಿರಿಸಿ ಪೊಲೀಸ್ ಭದ್ರತೆ ನೀಡಿದ್ದರೂ ಶನಿವಾರ ರಾತ್ರಿ ನಾಲ್ಕು ಕಡೆ ಅಂಗಡಿಗಳಿಗೆ ಬೆಂಕಿ ಹಚ್ಚಿದ ಘಟನೆ ತಡರಾತ್ರಿ ಸಂಭವಿಸಿದೆ.

ಪುತ್ತೂರಿನಲ್ಲಿ ನಡೆದ ಹಿಂದೂ ಹೃದಯ ಸಂಗಮ ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದ ಬೆಳ್ತಂಗಡಿ ಪರಿಸರದ ನಾಗರಿಕರ ಮೇಲೆ ಕರಾಯದಲ್ಲಿ ಕಲ್ಲು ತೂರಾಟ ನಡೆದ ಬೆನ್ನಲ್ಲೇ ಉದ್ಭವಿಸಿದ ಕೋಮು ಗಲಭೆಯ ದುಷ್ಪರಿಣಾ ಉಪ್ಪಿನಂಗಡಿಯಲ್ಲೂ ಕಂಡು ಬಂದು ವ್ಯಾಪಕ ದಾಂದಲೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಶನಿವಾರ ಉಪ್ಪಿನಂಗಡಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಸಹಿತ 700 ಮಂದಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದಾಗ್ಯೂ ದುಷ್ಕರ್ಮಿಗಳು ಉಪ್ಪನಂಗಡಿಯ ಹೃದಯ ಭಾಗದಲ್ಲಿನ ತರಕಾರಿ ಅಂಗಡಿ, ಸ್ವೀಟ್ಸ್ ಸ್ಟಾಲ್ ಮತ್ತು ಜ್ಯೂಸ್ ಅಂಗಡಿಗೆ ನುಗ್ಗಿ ಅದರಲ್ಲಿದ್ದ 1.72 ಲಕ್ಷ ನಗದು ಹಣವನ್ನು ಅಪಹರಿಸಿ, ಅಂಗಡಿಗೆ ಬೆಂಕಿ ಹಚ್ಚಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com