ಬೆಂಗಳೂರು: ಶೇಷಾದ್ರಿಪುರಂ ಪಿಯು ಕಾಲೇಜಿನ ಉಪನ್ಯಾಸಕ ಮುನಿರಾಜು(32) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಸವೇಶ್ವರ ನಗರ ಬಿಇಎಂಎಲ್ ಕಾಲೋನಿಯಲ್ಲಿ ಪತ್ನಿಯೊಂದಿಗೆ ಮುನಿರಾಜು ವಾಸವಿದ್ದರು. ಮದ್ಯವ್ಯಸನಿಯಾಗಿದ್ದರಿಂದ ಮನೆಯಲ್ಲಿ ದಂಪತಿ ನಡುವೆ ಜಗಳವಾಗುತ್ತಿತ್ತು.
ಗುರುವಾರ ರಾತ್ರಿಯೂ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡಿದ್ದರು.
ಈ ವೇಳೆ ಬೇಸರ ಮಾಡಿಕೊಂಡ ಮುನಿರಾಜು ಕೊಠಡಿಗೆ ತೆರಳಿ ದುಪ್ಪಟ್ಟಾದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement