ಬಸ್ ಟಿಕೆಟ್‌ನಲ್ಲಿ ಪ್ರೇಮ ಪತ್ರ ಬರೆದಿದ್ದ ಕಂಡಕ್ಟರ್ ಅಮಾನತು

ನಿತ್ಯ ತನ್ನ ಬಸ್ಸಿನಲ್ಲೇ ಓಡಾಡುತ್ತಿದ್ದ ಕಾಲೇಜ್ ವಿದ್ಯಾರ್ಥಿನಿಗೆ ಬಸ್ ಟಿಕೆಟ್‌ನಲ್ಲೇ ಪ್ರೇಮ ಸಂದೇಶ ಬರೆದಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ...
ಕಂಡಕ್ಟರ್ ಗೋಪಾಲ್
ಕಂಡಕ್ಟರ್ ಗೋಪಾಲ್

ಬಳ್ಳಾರಿ: ನಿತ್ಯ ತನ್ನ ಬಸ್ಸಿನಲ್ಲೇ ಓಡಾಡುತ್ತಿದ್ದ ಕಾಲೇಜ್ ವಿದ್ಯಾರ್ಥಿನಿಗೆ ಬಸ್ ಟಿಕೆಟ್‌ನಲ್ಲೇ ಪ್ರೇಮ ಸಂದೇಶ ಬರೆದಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ)ಯ ಕಂಡಕ್ಟರ್‌ನನ್ನು ಶನಿವಾರ ಅಮಾನತುಗೊಳಿಸಲಾಗಿದೆ.

ನಿನ್ನೆ ಕಂಡಕ್ಟರ್ ಗೋಪಾಲ್ ಅವರು ಬಳ್ಳಾರಿಯಿಂದ ಗೋನಾಳಕ್ಕೆ ಹೋಗುವ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೌಲ್ ಬಜಾರ್‌ನ ಕಾಲೇಜು ವಿದ್ಯಾರ್ಥಿನಿಗೆ ಟಿಕೆಟ್‌ನ ಹಿಂದೆ ಪ್ರೇಮ ಸಂದೇಶ ಹಾಗೂ ಮೊಬೈಲ್ ನಂಬರ್ ಹಾಕಿ ಕೊಟ್ಟಿದ್ದಾನೆ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ಸಹ ಪ್ರಯಾಣಿಕರಿಗೆ ತಿಳಿಸಿದ್ದಾಳೆ. ಬಳಿಕ ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪಿಜಿ ಪಾರ್ಥಸಾರಥಿ ಅವರು ಇಂದು ಗೋಪಾಲ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ನಿತ್ಯ ತನ್ನದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ಕಂಡಕ್ಟರ್ ಗೋಪಾಲ್ ಪ್ರೀತಿಸುತ್ತಿದ್ದ. ಹೀಗಾಗಿ ಟಿಕೆಟ್ ಮೂಲಕ ಪ್ರೇಮ ನಿವೇದನೆ ಮಾಡಿದ್ದಾನೆ. ಇದನ್ನು ಅರ್ಥ ಮಾಡಿಕೊಳ್ಳದ ಯುವತಿ ಸಾರ್ವಜನಿಕರಿಗೆ ತಿಳಿಸಿದ್ದಾಳೆ.

ಟಿಕೆಟ್ ಮೇಲೆ ಕಂಡಕ್ಟರ್ ಬರೆದ ಪ್ರೇಮ ಪತ್ರ: 'ಹಾಯ್ ಯಾಕೋ ನಿನ್ನ ಹತ್ರ ಮಾತಾಡಬೇಕು ಅನ್ನಿಸ್ತಾ ಇದೆ. ಇದು ಲವ್ ಏನೋ ಗೊತ್ತಿಲ್ಲ' ಎಂದು ಬರೆದ ಗೋಪಾಲ್ ಕೆಳಗೆ ಅವನ ನಂಬರ್ ಹಾಕಿ ಇಂದು ಯುವತಿ ಕೈಗೆ ಕೊಟ್ಟಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com