ಕರ್ನಾಟಕ ಮಂಗಳಮುಖಿಯರ ವೇದಿಕೆ ರಚನೆ

ಮಂಗಳಮುಖಿಯರು ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಲು ಕರ್ನಾಟಕ ಮಂಗಳಮುಖಿಯರ ವೇದಿಕೆ ರಚನೆಯಾಗಿದೆ...
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮಂಗಳಮುಖಿ ವೇದಿಕೆಯ ಅಧ್ಯಕ್ಷರಾದ ಗೀತಮ್ಮ, ಕನಕಮ್ಮ ಮತ್ತಿತರರು ಹಾಜರಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮಂಗಳಮುಖಿ ವೇದಿಕೆಯ ಅಧ್ಯಕ್ಷರಾದ ಗೀತಮ್ಮ, ಕನಕಮ್ಮ ಮತ್ತಿತರರು ಹಾಜರಿದ್ದರು.
Updated on

ಬೆಂಗಳೂರು: ಮಂಗಳಮುಖಿಯರು ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಲು ಕರ್ನಾಟಕ ಮಂಗಳಮುಖಿಯರ ವೇದಿಕೆ ರಚನೆಯಾಗಿದೆ.

ಮಂಗಳಮುಖಿಯರು ಅನುಭವಿಸುತ್ತಿರುವ ಸಮಸ್ಯೆ, ಕುಂದುಕೊರತೆಗಳನ್ನು ಆಲಿಸಿ ಅವರಿಗೆ ಪರಿಹಾರ ಕಂಡುಕೊಳ್ಳಲು ಇಬ್ಬರನ್ನು ನಾಯಕಿಯರನ್ನಾಗಿ ನೇಮಿಸಿದ್ದು, ನಾಳೆ ಹಲಸೂರು ಕೆರೆ ಸಮೀಪದಲ್ಲಿರುವ ಸಮುದಾಯಭವನದಲ್ಲಿ ಸನ್ಮಾನ ಕಾರ್ಯಕ್ರಮ ಹಾಗೂ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಮುಖಂಡೆ ಸೌಮ್ಯಶ್ರೀ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವೇದಿಕೆಯ ಇಬ್ಬರು ಅಧ್ಯಕ್ಷರಾದ ಗೀತಮ್ಮ ಮತ್ತು ಕನಕಮ್ಮ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೇ, ಮಂಗಳಮುಖಿಯರ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com