ಪ್ರಭಾವಿ ಭೂ ಒತ್ತುವರಿದಾರರ ಪಟ್ಟಿ ಬಿಡುಗಡೆ ಮಾಡಿದ ಲೋಕಸತ್ತಾ ಪಕ್ಷ

ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಪ್ರಬಾವಿ ವ್ಯಕ್ತಿಗಳ ಪಟ್ಟಿಯನ್ನು ಲೋಕಸತ್ತಾ ಪಕ್ಷ ಮಂಗಳವಾರ ಬಿಡುಗಡೆ ಮಾಡಿದೆ.
ಪ್ರಭಾವಿ ಒತ್ತುವರಿದಾರರ ಪಟ್ಟಿ ಬಿಡುಗಡೆ ಮಾಡಿದ ಲೋಕಸತ್ತಾ ಪಕ್ಷದ ಮುಖಂಡರು
ಪ್ರಭಾವಿ ಒತ್ತುವರಿದಾರರ ಪಟ್ಟಿ ಬಿಡುಗಡೆ ಮಾಡಿದ ಲೋಕಸತ್ತಾ ಪಕ್ಷದ ಮುಖಂಡರು
Updated on

ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಪ್ರಬಾವಿ ವ್ಯಕ್ತಿಗಳ ಪಟ್ಟಿಯನ್ನು ಲೋಕಸತ್ತಾ ಪಕ್ಷ ಮಂಗಳವಾರ ಬಿಡುಗಡೆ ಮಾಡಿದೆ.

ಪ್ರೆಸ್ ಕ್ಲಬ್ ನಲ್ಲಿ ಭೂ ಒತ್ತುವರಿದಾರರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಲೋಕಸತ್ತಾ ಪಕ್ಷದ ರಾಜ್ಯಧ್ಯಕ್ಷ ಮುಕುಂದ, ಬೆಂಗಲೂರಿನಲ್ಲಿ ಒಟ್ಟು 927 ಎಕರೆ 2 ಗುಂಟೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಪ್ರಭಾವಿ ವ್ಯಕ್ತಿಗಳಿಂದ ಈ ಒತ್ತುವರಿಯಾಗಿದ್ದು, ಈ ಮಾಹಿತಿ ಸರ್ಕಾರದಲ್ಲಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ರಾಜರಾಜೇಶ್ವರಿ ನಗರದಲ್ಲಿರುವ ಶಕ್ತಿ ರೆಸಾರ್ಟ್ ಕ್ಲಬ್- 2 ಎಕರೆ, ಜರಗನಹಳ್ಳಿ ನಗರಸಭೆ ಸದಸ್ಯ ರಾಮಣ್ಣ-37 ಗುಂಟೆ, ಕಾಂಗ್ರೆಸ್ ಮುಖಂಡ ಶಾಂತರಾಜು ಅವರು ಉತ್ತರಬಳ್ಳಿ ಸಮೀಪದಲ್ಲಿ 1 ಎಕರೆ 10 ಗುಂಟೆ, ಕಟ್ಟಾ ಸುಬ್ರಮಣ್ಯ ಮಗ ಜಗದೀಶ್ ನಾಯ್ಡು -4 ಎಕರೆ, ಕೆಂಗೇರಿ ಕಂಬೀಪುರದ ಬಳಿ ಇರುವ ಆದಿಚುಂಚನಗಿರಿ ಸಂಸ್ಥೆಯಿಂದ 5 ಎಕರೆ 20 ಗುಂಟೆ, ಕೊಡಿಗೇಹಳ್ಳಿ ಸಮೀಪದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಾಮನ ಚಾರ್ಯ ಅವರಿಂದ 5 ಎಕರೆ... ಸೇರಿದಂತೆ ಅನೇಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆಗೊಳಿಸಿದೆ.

ಸರ್ಕಾರ ಕೂಡಲೇ ಈ ಒತ್ತುವರಿದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಮುಕುಂದ ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com