ಬೆಂಗಳೂರು: ದೊಮ್ಮಲೂರು ಮೇಲ್ಸೇತುವೆ ಬಳಿ ಶುಕ್ರವಾರ ಬೆಳಗ್ಗೆ ನಡುರಸ್ತೆಯಲ್ಲಿ ಮಗಳೊಂದಿಗೆ ಅಮಾನವೀಯವಾಗಿ ವರ್ತಿಸಿ ಹಲ್ಲೆ ನಡೆಸಿದ ತಮಿಳುನಾಡು ಎಸ್ಸೈ ರಾಜಾರಾಮ್ ವಿರುದ್ಧ ಹಲಸೂರು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಮಧುರೆ ಮೂಲದ ಯುವತಿ ಸೂರ್ಯ ನಗರದ ಹಾಸ್ಟೆಲ್ವೊಂದರಲ್ಲಿ ವಾಸವಿದ್ದಳು. ಈಕೆ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದು ಆತನೊಂದಿಗೆ ಓಡಾಡುತ್ತಿದ್ದಾಳೆ ಎನ್ನುವ ಅನುಮಾನದ ಮೇಲೆ ತಂದೆ ರಾಜಾರಾಮ್ ಹಲ್ಲೆ ನಡೆಸಿದ್ದ.
ಸಾರ್ವಜನಿಕರ ಎದುರೇ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಒತ್ತಡಕ್ಕೆ ಮಣಿದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Advertisement