ವಂಡರ್ ಲಾ ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಂಡರ್ ಲಾ ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರು ಭಾನುವಾರ ಬೆಳಿಗ್ಗೆ 10 ಗಂಟೆಗೆ...
ಪತ್ರಿಕಾಗೋಷ್ಠಿ ನಡೆಸಿದ ವಂಡರ್ ಲಾ ಕಾರ್ಮಿಕ ಸಂಘದ ಗಂಗಣ್ಣ, ರವಿಕುಮಾರ್ ಮತ್ತಿತರರು.
ಪತ್ರಿಕಾಗೋಷ್ಠಿ ನಡೆಸಿದ ವಂಡರ್ ಲಾ ಕಾರ್ಮಿಕ ಸಂಘದ ಗಂಗಣ್ಣ, ರವಿಕುಮಾರ್ ಮತ್ತಿತರರು.

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಂಡರ್ ಲಾ ಆಡಳಿತ ಮಂಡಳಿ ವಿರುದ್ಧ ಕಾರ್ಮಿಕರು ಭಾನುವಾರ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಂಡರ್ ಲಾ ಸಂಘದ ಗಂಗಣ್ಣ, ವಂಡರ್ ಲಾ ಆಡಳಿತ ಮಂಡಳಿ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಕಾರಣವಿಲ್ಲದೇ ಅನೇಕ ಕಾರ್ಮಿಕರನ್ನು ಅಮಾನತುಗೊಳಿಸುತ್ತಿದೆ. ಈ ಸಂಬಂಧ ಪೊಲೀಸರಲ್ಲಿ ದೂರು ನೀಡಲು ಹೋದರೆ ಅವರು ಕೂಡ ಆಡಳಿತ ಮಂಡಳಿ ಪರವಾಗಿ ನಿಂತಿದ್ದು, ನಮ್ಮ ಅಹವಾಲನ್ನು ಆಲಿಸುತ್ತಿಲ್ಲ ಎಂದು ಆಪಾದಿಸಿದರು.

ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿ ವಿರುದ್ಧ ಭಾನುವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯ ವಂಡರ್ ಲಾ ಗೇಟ್ ನಿಂದ ವಂಡರ್ ಲಾ ಕಂಪನಿಯವರೆಗೆ ಮೆರವಣಿಗೆ ನಡೆಸಲಿದ್ದು, ಕಂಪನಿ ಎದುರು ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com