ಚಿಕ್ಕಕೆರೆಗೆ ಕಸದ ಗಂಡಾಂತರ

ಪಟ್ಟಣದ ಅಂಚಿನಲ್ಲಿರುವ ಚಿಕ್ಕಕೆರೆ ಒಂದೆಡೆ ಒತ್ತುವರಿಯಿಂದ, ಮತ್ತೊಂದೆಡೆ ಕುಂಬಳಹಳ್ಳಿ ಗ್ರಾಮಕ್ಕೆ ಅಕ್ರಮ ಸಂಪರ್ಕ ರಸ್ತೆ ನಿರ್ಮಾಣದಿಂದ ಅಳಿವು ಉಳಿವಿಗಾಗಿ ಹೋರಾಡುತ್ತಿದ್ದರೆ ಇದೀಗ ನಗರಸಭೆ ತ್ಯಾಜ್ಯ ವಸ್ತುಗಳನ್ನು ಸುರಿಯುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೊಸಕೋಟೆ: ಪಟ್ಟಣದ ಅಂಚಿನಲ್ಲಿರುವ ಚಿಕ್ಕಕೆರೆ ಒಂದೆಡೆ ಒತ್ತುವರಿಯಿಂದ, ಮತ್ತೊಂದೆಡೆ ಕುಂಬಳಹಳ್ಳಿ ಗ್ರಾಮಕ್ಕೆ ಅಕ್ರಮ ಸಂಪರ್ಕ ರಸ್ತೆ ನಿರ್ಮಾಣದಿಂದ ಅಳಿವು ಉಳಿವಿಗಾಗಿ ಹೋರಾಡುತ್ತಿದ್ದರೆ ಇದೀಗ ನಗರಸಭೆ ತ್ಯಾಜ್ಯ ವಸ್ತುಗಳನ್ನು ಸುರಿಯುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಕೆಲವು ವರ್ಷಗಳ ಹಿಂದೆ ಇದೇ ರೀತಿ ತ್ಯಾಜ್ಯ ಸುರಿಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಪುನಃ ನಗರಸಭೆಯ ಟ್ರ್ಯಾಕ್ಟರ್‍ನಲ್ಲಿ ತ್ಯಾಜ್ಯ ಸುರಿಯಲಾಗುತ್ತಿದ್ದು ಮತ್ತೊಮ್ಮೆ ಸಮಸ್ಯೆ ಸೃಷ್ಟಿಗೊಂಡಿದೆ. ಕೆರೆ ಅಂಗಳದಲ್ಲಿ ಪಟ್ಟಣದ ಸಮೀಪದ ಸೊನ್ನದೇನಹಳ್ಳಿ, ಸೋಂಪುರ ಗ್ರಾಮಗಳಿಗೆ ಕಾಲುದಾ ರಿಯಿದ್ದು ಅದರ ಪಕ್ಕದಲ್ಲಿನ ಪೇದೆಗಳ ಬಳಿ ತ್ಯಾಜ್ಯ ಸುರಿಯುತ್ತಿದ್ದು ಅಕ್ಕಪಕ್ಕದ ತೋಟಗಳಲ್ಲಿ ಬೆಳೆ ಬೆಳೆಯುವ ರೈತರಿಗೆ ದುರ್ವಾಸನೆ ಸಹಿಸಲು ಸಾಧ್ಯವಾಗುತ್ತಿಲ್ಲ.

ಅನೇಕ ಸಾಂಕ್ರಾಮಿಕ ರೋಗಗಳು ಸಹ ಹರಡುವ ಭೀತಿ ಉಂಟಾಗಿದೆ. ಇದರೊಂದಿಗೆ ಕೆರೆಯಲ್ಲಿನ ಅಲ್ಲಲ್ಲಿ ಕಂಡುಬರುವ ಹಸಿರು ಹುಲ್ಲನ್ನು ಮೇಯಲು ಬರುವ ರಾಸುಗಳು ಸಹ ತ್ಯಾಜ್ಯ ವಸ್ತುಗಳನ್ನು ತಿಂದು ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಸುತ್ತ ಮುತ್ತಲಿನ ರೈತರು, ನಿವಾಸಿಗಳು ಮನವಿ ಮಾಡಿದ್ದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com