ಬೆಂಗಳೂರು: ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕಾಗಿ ಮೂವರು ಯುವಕರು 16ರ ಹರೆಯದ ವಿದ್ಯಾರ್ಥಿನಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಹಲ್ಲೆಗೈದ ಘಟನೆ ವರದಿಯಾಗಿದೆ..ಬ್ರಿಂದಾ ಎಂಬ ಹುಡುಗಿ ಕಾಲೇಜಿನಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. .ದಾಳಿ ಮಾಡಿದ ಯುವಕರಲ್ಲಿ ಒಬ್ಬ ಬ್ರಿಂದಾಗೆ ಪ್ರೇಮ ನಿವೇದನೆ ಮಾಡಿದ್ದು, ಅದನ್ನಾಕೆ ತಿರಸ್ಕರಿಸಿದ್ದಳು..ನಾವು ತುಂಬಾ ಬಡ ಕುಟುಂಬದವರು, ತುಂಬಾ ಭಯವಾಗುತ್ತಿದೆ ಎಂದು ಬ್ರಿಂದಾ ಅಮ್ಮ ಕಣ್ಣೀರಿಡುತ್ತಿದ್ದಾರೆ..ನನ್ನ ಮಗಳನ್ನು ರಕ್ಷಿಸಿ, ನನಗಿರುವುದು ಅವಳು ಮಾತ್ರ. ಅವಳ ಕೈಗೆ ಯಾವ ರೀತಿ ಏಟಾಗಿದೆ ಎಂಬುದನ್ನು ನೋಡಿ. ಅವಳ ಈ ಅವಸ್ಥೆ ನನ್ನಿಂದ ನೋಡಲಾಗುವುದಿಲ್ಲ ಎಂದು ಅಮ್ಮ ಕಣ್ಣೀರಾಗುತ್ತಾರೆ..Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos