ಸಂಗೀತ, ವಿಜ್ಞಾನದಲ್ಲಿದೆ ವಿಫುಲ ಅವಕಾಶ

``ಸಂಗೀತ ಹಾಗೂ ವಿಜ್ಞಾನ ಕ್ಷೇತ್ರಗಳ ಹರಿವು ಬಹಳಷ್ಟು ವಿಸ್ತಾರವಾದುದು. ಈ ಕ್ಷೇತ್ರಗಳಲ್ಲಿ ಜೀವನ ಪರ್ಯಂತ ಕಲಿಯುವುದು ಮತ್ತು ಸಾಧಿಸುವುದು ಇದ್ದೆ ಇರುತ್ತದೆ. ನಿರಂತರ ಅಭ್ಯಸಿಸುವ ಆಸಕ್ತಿ ಇದ್ದವರು ಈ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳೆಯಲು ಅವಕಾಶವಿರುತ್ತದೆ...
ಭಾರತ ರತ್ನ ಸಿ.ಎನ್.ಆರ್.ರಾವ್ (ಸಂಗ್ರಹ ಚಿತ್ರ)
ಭಾರತ ರತ್ನ ಸಿ.ಎನ್.ಆರ್.ರಾವ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ``ಸಂಗೀತ ಹಾಗೂ ವಿಜ್ಞಾನ ಕ್ಷೇತ್ರಗಳ ಹರಿವು ಬಹಳಷ್ಟು ವಿಸ್ತಾರವಾದುದು. ಈ ಕ್ಷೇತ್ರಗಳಲ್ಲಿ ಜೀವನ ಪರ್ಯಂತ ಕಲಿಯುವುದು ಮತ್ತು ಸಾಧಿಸುವುದು ಇದ್ದೆ ಇರುತ್ತದೆ. ನಿರಂತರ ಅಭ್ಯಸಿಸುವ ಆಸಕ್ತಿ ಇದ್ದವರು ಈ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳೆಯಲು ಅವಕಾಶವಿರುತ್ತದೆ,'' ಎಂದು ಭಾರತ ರತ್ನ ಸಿ.ಎನ್.ಆರ್.ರಾವ್ ಅಭಿಪ್ರಾಯಪಟ್ಟರು.

ಅಕಾಡೆಮಿ ಆಫ್ ಮ್ಯೂಸಿಕ್ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,`` ಈ ಎರಡೂ ಕ್ಷೇತ್ರಗಳಲ್ಲೂ ಎಷ್ಟು ಸಾಧನೆ ಮಾಡಿದರೂ ತೃಪ್ತಿ ಇರುವುದಿಲ್ಲ. ಹಿಂದೂಸ್ತಾನಿ ಸಂಗೀತ ಗಾಯಕ ಭಾರತ ರತ್ನ ಭೀಮಸೇನ ಜೋಷಿ ಅವರೂ ಸಹ ತಮ್ಮ ಕೊನೆಯ ದಿನಗಳಲ್ಲೂ ಈ ಮಾತನ್ನು ಹೇಳುತ್ತಿದ್ದರು,'' ಎಂದು ರಾವ್ ಸ್ಮರಿಸಿಕೊಂಡರು.

``ನಾನು ಕೇವಲ ವಿಜ್ಞಾನ ಮಾತ್ರವಲ್ಲ ಸಂಗೀತ ಕೇಳುವುದರಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಇದರಿಂದ ಸಾಧನೆಗೆ ಸಾಕಷ್ಟು ಸಹಾಯವಾಗಿದೆ,'' ಎಂದೂ ಇದೇ ವೇಳೆ ಅಭಿಪ್ರಾಯಪಟ್ಟರು. ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿದುಷಿ ಮಂಜುಳಾ ಸುರೇಂದ್ರ ಮತ್ತಿತರರು ಇದ್ದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com