ಬೆಂಗಳೂರು: 'ನಾವೆಲ್ಲರೂ ಭಾರತೀಯರು'' ಚಲನಚಿತ್ರ ನಿರ್ಮಾಪಕಿ ಪುಷ್ಪಾ ಭದ್ರಾವತಿಯವರಿಗೆ ಜಯಸಿಂಹ ಮುಸುರಿಯವರು ಸ್ಯಾಟ್ ಲೈಟ್ ಪ್ರಸಾರದ ಹಕ್ಕಿನ ವಿಚಾರದಲ್ಲಿ ವಂಚಿಸಿದ್ದಾರೆ ಎಂದು ಪುಷ್ಪಾ ಪರ ವಕೀಲೆ ರಶ್ಮಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಚಿತ್ರದ ಸ್ಯಾಟ್ಲೈಟ್ ಹಕ್ಕಿಗಾಗಿ ಶರತ್ ಎಂಟರ್ಪ್ರೈಸಸ್ನ ಕವಿತಾ ರಾವ್ 2008ರ ಮಾರ್ಚ್ 18ರಂದು ರು.75ಲಕ್ಷಗಳಿಗೆ ಬಾಯಿ ಮಾತಿನ ಮೂಲಕ ಒಪ್ಪಂದ ಮಾಡಿ ಕೊಂಡಿದ್ದರು. ಆದರೆ, ಇದುವರೆಗೆ ಕೇವಲ ರು.6ಲಕ್ಷ ಮಾತ್ರ ನೀಡಿದ್ದಾರೆ .
ಕವಿತಾ ರಾವ್ ಅವರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವ ಜಯಸಿಂಹ ಮುಸುರಿಯವರು ಪುಷ್ಪಾ ಅವರಿಗೆ ಬಾಯಿ ಮಾತಿನ ಮೂಲಕ ಒಪ್ಪಂದ ಮಾಡಿಕೊಂಡು ಖಾಲಿ ಕಾಗದಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
Advertisement