ಗಿರಿನಗರ ಮಠದಲ್ಲಿ ಸಿಐಡಿ ಅಧಿಕಾರಿಗಳು

ರಾಘವೇಶ್ವರ ಶ್ರೀಗಳ ವಿರುದ್ಧ ದಾಖಲಾ ಗಿರುವ 2ನೇ ಅತ್ಯಾಚಾರ ಆರೋಪ ಪ್ರಕರಣ ಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಗುರುವಾರ ಶ್ರೀಗಳಿಗೆ ಶಾಕ್ ನೀಡಿದರು. ಗುರುವಾರ ಮಧಾಹ್ನ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠದ ಶಾಖೆಗೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು ಸ್ಥಳ ಪಂಚನಾಮೆ ನಡೆಸಿದರು...
ರಾಘವೇಶ್ವರ ಶ್ರೀ (ಸಂಗ್ರಹ ಚಿತ್ರ)
ರಾಘವೇಶ್ವರ ಶ್ರೀ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಘವೇಶ್ವರ ಶ್ರೀಗಳ ವಿರುದ್ಧ ದಾಖಲಾ ಗಿರುವ 2ನೇ ಅತ್ಯಾಚಾರ ಆರೋಪ ಪ್ರಕರಣ ಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಗುರುವಾರ ಶ್ರೀಗಳಿಗೆ ಶಾಕ್ ನೀಡಿದರು. ಗುರುವಾರ ಮಧಾಹ್ನ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠದ ಶಾಖೆಗೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು ಸ್ಥಳ ಪಂಚನಾಮೆ ನಡೆಸಿದರು.

ಗುರುವಾರ ಮಧ್ಯಾಹ್ನ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠದ ಶಾಖೆಗೆ ದಿಢೀರ್ ಭೇಟಿ ನೀಡಿದ ಅಧಿಕಾರಿಗಳು ಸ್ಥಳ ಪಂಚನಾಮೆ ನಡೆಸಿದರು. ಗಿರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಈ ವೇಳೆ ಪೊಲೀಸರು ದೂರುದಾರರನ್ನು ಮಠಕ್ಕೆ ಕರೆದುಕೊಂಡು ಹೋಗಿ, ವಿಚಾರಣೆ ನಡೆಸಿದರು.ಮಧ್ಯಾಹ್ನ ಸುಮಾರು 3.30ಕ್ಕೆ ಮಠಕ್ಕೆ ತೆರಳಿದ ಸಿಐಡಿ ಪಂಚನಾಮೆ ನಡೆಸಿದ್ದಾರೆ. ಪಠಕ್ಕೆ ಹೋದ ಕ್ಷಣದಿಂದ ಪಂಚನಾಮೆ ಸಂಪೂರ್ಣ ಮುಕ್ತಾಯವಾಗುವವರೆಗೂ ನಡೆದ ವಿಚಾರಣೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

2006ರಲ್ಲಿ ಹೊಸನಗರ ಹಾಗೂ 2012ರಲ್ಲಿ ಗಿರಿನಗರದ ಮಠದಲ್ಲಿ ಶ್ರೀಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ದೂರುದಾರರು ತಿಳಿಸಿದ್ದರು. ಹಾಗಾಗಿ ಮಠದಲ್ಲಿ ಶ್ರೀ ಹಾಗೂ ದೂರುದಾರರ ನಡುವೆ ನಡೆದ ಸಂಭಾಷಣೆ, ಇತ್ಯಾದಿ ಕುರಿತಂತೆ 2 ಗಂಟೆ ಕಾಲ ಮಹಜರು ಮಾಡಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com