ಕೊಲೆ ಮಾಡಿ ಉಸಿರು ನಿಲ್ಲುವವರೆಗೆ ಕಾಯ್ದಿದ್ದ ಕ್ರೂರಿ ಹಂತಕ

ಏರ್ ಪೋರ್ಟ್ ಗೆ ಹುಸಿಕರೆ ಮಾಡಿ, ಪತ್ನಿ ಕೊಲೆ ಪ್ರಕರಣದಲ್ಲೂ ಬಂಧಿತನಾಗಿರುವ ಕೇರಳ ಮೂಲದ ಎಂಬಿಎ ಪದವಿಧರ ಗೋಕುಲ್, ಪತ್ನಿ ಅನುರಾಧ ತಲೆಗೆ ಗಣೇಶ ವಿಗ್ರಹದಿಂದ ಹಲ್ಲೆ ಮಾಡಿದ ನಂತರ ಬರೋಬ್ಬರಿ 2 ತಾಸುಗಳ ಕಾಲ ಉಸಿರು...
ಎಂ.ಜಿ. ಗೋಕುಲ್ (ಸಂಗ್ರಹ ಚಿತ್ರ)
ಎಂ.ಜಿ. ಗೋಕುಲ್ (ಸಂಗ್ರಹ ಚಿತ್ರ)

ಬೆಂಗಳೂರು: ಏರ್ ಪೋರ್ಟ್ ಗೆ ಹುಸಿಕರೆ ಮಾಡಿ, ಪತ್ನಿ ಕೊಲೆ ಪ್ರಕರಣದಲ್ಲೂ ಬಂಧಿತನಾಗಿರುವ ಕೇರಳ ಮೂಲದ ಎಂಬಿಎ ಪದವಿಧರ ಗೋಕುಲ್, ಪತ್ನಿ ಅನುರಾಧ ತಲೆಗೆ ಗಣೇಶ ವಿಗ್ರಹದಿಂದ ಹಲ್ಲೆ ಮಾಡಿದ ನಂತರ ಬರೋಬ್ಬರಿ 2 ತಾಸುಗಳ ಕಾಲ ಉಸಿರು ನಿಲ್ಲುವವರೆಗೂ ಕಾದು ಕುಳಿತಿದ್ದ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಜು.28ರ ರಾತ್ರಿ ಪತ್ನಿಗೆ ಮದ್ಯ ಕುಡಿಸಿ ಜಗಳ ಮಾಡಿದ ಗೋಕುಲ್, ಆಕೆಯ ತಲೆಗೆ ಬಲವಾಗಿ ಹೊಡೆದಿದ್ದ. ಕುಸಿದು ಬಿದ್ದು ತೀವ್ರ ರಕ್ತಸ್ರಾವವಾಗುತ್ತಿದ್ದ ಪತ್ನಿ ಅನುರಾಧ ಬಳಿಯೇ ಉಸಿರು ನಿಲ್ಲುವವರೆಗೂ ಕಾಯ್ದು ಕುಳಿತಿದ್ದ. ತಲೆಗೆ ಹಲ್ಲೆ ಮಾಡಿದ್ದರಿಂದ ಕೆಲ ಹೊತ್ತಿನಲ್ಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರೆ ಅನುರಾಧ ಬದುಕುಳಿಯುತ್ತಿದ್ದಳು. ಹಾಗೆ ಮಾಡದೆ ಉಸಿರು ನಿಲ್ಲುವವರೆಗೂ ನೋಡುತ್ತ ನಿಂತಿದ್ದ. ನಸುಕಿನ ನಾಲ್ಕು ಗಂಟೆ ಸುಮಾರಿಗೆ ಪತ್ನಿ ಮೃತಪಟ್ಟಿದ್ದಾಳೆ ಎನ್ನುವುದನ್ನು ಖಚಿತಪಡಿಸಿಕೊಂಡ ನಂತರವೇ ಪೊಲೀಸರು, ಕುಟುಂಬ ಸದಸ್ಯರಿಗೆ ಕರೆ ಮಾಡಿ ತಿಳಿಸಿದ್ದ.

ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ 2 ವರ್ಷದ ಮಗಳು ಮನೆಯಲ್ಲೇ ಇದ್ದಳು. ಆದರೆ, ಆಕೆಗೆ ತನ್ನ ತಾಯಿಯನ್ನು ತಂದೆಯೇ ಕೊಲೆಗೈದಿದ್ದಾನೆ ಎನ್ನುವ ಸಣ್ಣ ಅರಿವೂ ಇರಲಿಲ್ಲ. ಪತ್ನಿ ಕೊಲೆ ಗೈಯ್ಯಲು ಆರೋಪಿ ಬಳಸಿದ್ದ ಗಣೇಶ ವಿಗ್ರಹ ಪ್ರಮುಖ ಸಾಕ್ಷ್ಯವಾಗಲಿದೆ. ಹೀಗಾಗಿ, ಅದನ್ನು ಪತ್ತೆ ಮಾಡಬೇಕಿದೆ. ಅದನ್ನು ಆರೋಪಿ ಎಲ್ಲಿಟ್ಟಿದ್ದಾನೆ ಎನ್ನುವುದನ್ನೇ ಬಾಯ್ಬಿಡುತ್ತಿಲ್ಲ. ಹೀಗಾಗಿ, ಆತನನ್ನು ಮನೆಗೆ ಕರೆದೊಯ್ದು ಪರಿಶೀಲನೆ ಕಾರ್ಯ ನಡೆಸು ವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ಮಾಡಿಕೊಡಲಾಯಿತು. ಆತ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಕೇಳಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಪಾಲಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com