ಘಟನೆಯಲ್ಲಿ 20ಕ್ಕೂ ಹೆಚ್ಚು ಬೈಕುಗಳು, 3 ಕ್ರೂಸರ್, 30ಕ್ಕೂ ಹೆಚ್ಚು ಅಂಗಡಿ, 4 ಮನೆಗಳು ಭಸ್ಮವಾಗಿವೆ. ಡಿಸಿ ಮೇಘಣ್ಣವರ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದರು. ಬೆಳಗಾವಿ, ಬಾಗಲಕೋಟೆ, ಕೊಪ್ಪಳದಿಂದ ಹೆಚ್ಚುವರಿ ಪೊಲೀಸ್ ಕರೆಸಲಾಗಿದೆ. ಎರಡು ಅರೆಸೇನಾ ತುಕಡಿಗಳನ್ನೂ ಕರೆಸಿಕೊಳ್ಳಲಾಯಿತು. ಮತ್ತೊಂದಡೆ ಸಂಘಟಕರು ಗಣೇಶನ ಮೂರ್ತಿ ವಿಸರ್ಜನೆಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟುಹಿಡಿದು ಕುಳಿತರು. ಜಿಲ್ಲಾಧಿಕಾರಿ ಮೇಘಣ್ಣವರ ಸಂಘಟಕರ ಬಳಿ ಮೂರ್ನಾಲ್ಕು ಸುತ್ತು ಮಾತುಕತೆ ನಡೆಸಿ ಅನಂತರ ಅವರ ಮನವೊಲಿಸಿದರು. ಮುಂಜಾನೆ 4 ಗಂಟೆಗೆ ವಿಸರ್ಜನೆ ಮಾಡಲಾಯಿತು.