ಬಳ್ಳಾರಿ: ಬಳ್ಳಾರಿಯ ಹಗರಿ ಬೊಮ್ಮನಹಳ್ಳಿಯಲ್ಲಿ ಒಂದೇ ಕುಟುಂಬದ 24 ಜನರು ಮರಣಾನಂತರ ದೇಹದಾನ ಮಾಡಲು ನಿರ್ಧರಿಸಿದ್ದಾರೆ.
ಇಲ್ಲಿನ ವಿಮ್ಸ್ ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬದ ಸದಸ್ಯರು ನಿರ್ಧರಿಸಿದ್ದು, ಮರಣಾನಂತರ ದೇಹ ಮಣ್ಣಾಗುವುದು ಅಥವಾ ಬೂದಿಯಾಗುವುದರ ಬದಲು ವೈದ್ಯಕೀಯ ಕ್ಷೇತ್ರಕ್ಕೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ನಿರ್ಧಾರ ಕೈಗೊಂಡಿದ್ದಾರೆ.
ಕುಟುಂಬದ ಮುಖ್ಯಸ್ಥರಾಗಿದ್ದ ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ರಾವ್ ದೇಹದಾನ ನಿರ್ಧಾರ ಕೈಗೊಂಡಿದ್ದರು. ಅವರ ನಿಧನಾನಂತರ ದೇಹವನ್ನು ವಿಮ್ಸ್ ಗೆ ದಾನ ಮಾಡಲಾಯಿತು. ಕೃಷ್ಣಮೂರ್ತಿ ರಾವ್ ಅವರ ನಿರ್ಧಾರವೇ ಕುಟುಂಬದ ಉಳಿದ ಸದಸ್ಯರಿಗೂ ಪ್ರೇರಣೆಯಾಗಿದ್ದು, ಪತ್ನಿ, ಮಕ್ಕಳು, ಅಳಿಯಂದಿರು ಹಾಗೂ ಸಹೋದರನ ಕುಟುಂಬದವರು ಸೇರಿ ಒಟ್ಟು 24 ಸದಸ್ಯರು ತಾವೂ ದೇಹದಾನ ಮಾಡಲು ನಿರ್ಧರಿಸಿ ರಾಜ್ಯದಲ್ಲಿ ಅಪರೂಪದ ದಾಖಲೆ ಮಾಡಿದ್ದಾರೆ.
Advertisement