ಮಂಗಳೂರು: ಅಲೆಗಳ ಅಬ್ಬರಕ್ಕೆ ಸಿಲುಕಿ ನಾಲ್ವರು ಯುವಕರ ದುರ್ಮರಣ

ಹಾಸನದಿಂದ ಮಂಗಳೂರಿನಗೆ ಬೈಕ್ ನಲ್ಲಿ ಲಾಂಗ್ ಡ್ರೈವ್ ಗೆ ಹೋಗಿದ್ದ ಆರು ಮಂದಿ ಯುವಕರ ಪೈಕಿ ನಾಲ್ವರು ಯುವಕರು ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ...
ಸಮುದ್ರದಲ್ಲಿ ಮುಳುಗಿ ಸಾವು
ಸಮುದ್ರದಲ್ಲಿ ಮುಳುಗಿ ಸಾವು
Updated on

ಉಳ್ಳಾಲ: ಹಾಸನದಿಂದ ಮಂಗಳೂರಿನಗೆ ಬೈಕ್ ನಲ್ಲಿ ಲಾಂಗ್ ಡ್ರೈವ್ ಗೆ ಹೋಗಿದ್ದ ಆರು ಮಂದಿ ಯುವಕರ ಪೈಕಿ ನಾಲ್ವರು ಯುವಕರು ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಹಾಸನ ಮೂಲದ ಆರು ಮಂದಿ ಯುವಕರು 3 ಬೈಕ್ ಗಳಲ್ಲಿ 6 ಮಂದಿ ಯುವಕರು ಮಂಗಳೂರಿನ ಉಳ್ಳಾಲದ ದರ್ಗಾವೊಂದಕ್ಕೆ ತೆರಳಿದ್ದರು. ದರ್ಗಾಗೆ ತೆರಳುವ ಮುನ್ನ ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ಸ್ನಾನಕ್ಕೆ ಇಳಿದಿದ್ದಾರೆ. ಈ ವೇಳೆ ಅಲೆಗಳ ರಭಸಕ್ಕೆ ನಾಲ್ವರು ಯುವಕರು ಕೊಚ್ಚಿ ಹೋಗಿದ್ದಾರೆ. ಉಳ್ಳಾಲ ಜೀವರಕ್ಷಕ ಸಿಬ್ಬಂದಿ ಶವಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮೃತರನ್ನು ಇಮ್ರಾನ್, ಖಲೀಲ್, ಹನೀಫ್ ಹಾಗೂ ಮೊಹಮ್ಮದ್ ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com