ಭಟ್ಕಳ: ಅರಬ್ ರಾಷ್ಟ್ರಗಳಿಗೆ ತೆರಳುವ ಭಟ್ಕಳಿಗರನ್ನು ದರೋಡೆ ಮಾಡುತ್ತಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಸಂಬಂಧ ಇಬ್ಬರು ಪಾಕಿಸ್ತಾನೀಯರನ್ನು ದುಬೈ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಭಟ್ಕಳದ ಹಲವು ಚಿನ್ನದ ವ್ಯಾಪಾರಿಗಳು ಮೊದಲಿನಿಂದಲೂ ಸೌದಿ ಅರೇಬಿಯಾ, ದುಬೈನಂಥ ಅರಬ್ ರಾಷ್ಟ್ರಗಳನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚಿನ್ನ ಖರೀದಿಸಲು ಹಣ ಹಿಡಿದು ಸಾಗುವ ಭಟ್ಕಳಿಗರಿಗೆ ದರೋಡೆಯ ಆತಂಕ ಕಾಡಲು ಶುರುವಾಗಿದೆ. ಈಗಾಗಲೇ 7-8 ದರೋಡೆ ಪ್ರಕರಣಗಳು ದಾಖಲಾಗಿದ್ದು, ಕೋಟ್ಯಂತರ ರುಪಾಯಿ ದರೋಡೆಕೋರರ ಪಾಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದೊಂದು ವಾರದ ಹಿಂದೆ ದರೋಡೆಕೋರರಿಬ್ಬರು ಸಿಕ್ಕಿಬಿದ್ದಿದ್ದು, ಆರೋಪಿಗಳು ಅರಬ್ ವೇಷದಲ್ಲಿದ್ದ ಪಾಕಿಸ್ತಾನೀಯರು ಎಂಬುದು ಖಚಿತವಾಗಿದೆ.
Advertisement