ಸಾಲಬಾಧೆಗೆ ಬೇಸತ್ತು ರೈತರಿಬ್ಬರ ಆತ್ಮಹತ್ಯೆ

ಸಾಲಭಾದೆಗೆ ಬೇಸತ್ತು ತಾಲೂಕಿನಲ್ಲಿ ಶನಿವಾರ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ...
ರೈತರ ಆತ್ಮಹತ್ಯೆ (ಸಂಗ್ರಹ ಚಿತ್ರ)
ರೈತರ ಆತ್ಮಹತ್ಯೆ (ಸಂಗ್ರಹ ಚಿತ್ರ)

ಮದ್ದೂರು: ಸಾಲಭಾದೆಗೆ ಬೇಸತ್ತು ತಾಲೂಕಿನಲ್ಲಿ ಶನಿವಾರ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ವಳಗೆರೆಹಳ್ಳಿಯ ನಾಥಪ್ಪ (52), ಸಾದೊಳಲು ಗ್ರಾಮದ ರೈತ ಶಿವಲಿಂಗೇಗೌಡ (58) ಆತ್ಮಹತ್ಯೆ ಮಾಡಿಕೊಂಡವರು. ನಾಥಪ್ಪ ಮನೆಯಲ್ಲಿ ನೇಣುಬಿಗಿದು ಕೊಂಡಿದ್ದಾರೆ.  ಕಬ್ಬು ಮತ್ತು ರೇಷ್ಮೆ ಬೆಳೆಗಾಗಿ ಒಟ್ಟು ರು.6.50 ಲಕ್ಷ ಸಾಲ ಮಾಡಿದ್ದರು. ಶಿವಲಿಂಗೇಗೌಡ ರು.4 ಲಕ್ಷ ಸಾಲ ಮಾಡಿದ್ದು, ಕಬ್ಬಿಗೆ ಸೂಕ್ತ ಬೆಲೆ ಸಿಗದೆ ಸಾವಿನ ಹಾದಿಹಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com