ಬೆಂಗಳೂರು: ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟ ಹಳೇ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸಿರುವ ಡಾ.ಎಪಿಜೆ ಅಬ್ದುಲ್ ಕಲಾಂ ವಿಷನ್ 2020 ಬಸ್ ನಿಲ್ದಾಣವನ್ನು ಶಾಸಕ ಬಿ.ಎ.ಬಸವರಾಜ್ ಅವರು ಉದ್ಘಾಟಿಸಿದರು.
ದೇಶದ ಮೊದಲ ಡಿಜಿಟಲ್ ಬಸ್ ನಿಲ್ದಾಣ ಇದಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾಗಳು, ಪೊಲೀಸ್ ಚೌಕಿ, ಆಧುನಿಕ ಮಾದರಿ ಶೌಚಾಲಯ, ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಕೌಂಟರ್ ಹಾಗೂ ಮಾರ್ಗಗಳ ಕುರಿತು ಮಾಹಿತಿ ನೀಡುವ ಡಿಜಿಟಲ್ ಡಿಸ್ ಪ್ಲೇ ಗಳನ್ನು ಅಳವಡಿಸಲಾಗಿದೆ.
ಶಾಸಕ ಬಿ.ಎ. ಬಸವರಾಜ್ ಮಾತನಾಡಿ, ಐಟಿಐ ಬಳಿ ಸುಸಜ್ಜಿತವಾದ ಆಧುನಿಕ ಬಸ್ ನಿಲ್ದಾಣ ನಿರ್ಮಿಸಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು. ಒಕ್ಕೂಟ ಅಧ್ಯಕ್ಷ ಎಲ್.ಶ್ರೀನಿವಾಸ್, ಬಿಬಿಎಂಪಿ ಸದಸ್ಯರಾದ ಶ್ರೀಕಾಂತ್, ಜಯಪ್ರಕಾಶ್, ರಾಧಮ್ಮ ವೆಂಕಟೇಶ್ ಹಾಜರಿದ್ದರು.
Advertisement