ಸಾವಿನಂಚಿನಲ್ಲಿರುವ ಮಹಿಳೆ ಆಸೆ ಈಡೇರಿಸಿದ ಮಾಜಿ ಸಿಎಂ ಎಚ್ ಡಿಕೆ

ತಮ್ಮನ್ನು ಖುದ್ದು ನೋಡಬೇಕು ಎಂದು ಆಸೆ ವ್ಯಕ್ತ ಪಡಿಸಿದ್ದ ಕ್ಯಾನ್ಸರ್ ಪೀಡಿತ ರೋಗಿಯ ಕೊನೆಯ ಆಸೆಯನ್ನು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಈಡೇರಿಸಿದ್ದಾರೆ....
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬಳ್ಳಾರಿ: ತಮ್ಮನ್ನು ಖುದ್ದು ನೋಡಬೇಕು ಎಂದು ಆಸೆ ವ್ಯಕ್ತ ಪಡಿಸಿದ್ದ ಕ್ಯಾನ್ಸರ್ ಪೀಡಿತ ರೋಗಿಯ ಕೊನೆಯ ಆಸೆಯನ್ನು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಈಡೇರಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮದ ಲಲಿತಮ್ಮಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಆಕೆ ಇನ್ನು ಬಹಳ ದಿನ ಬದುಕಿರುವುದಿಲ್ಲ. ಆಕೆಯ ಆಸೆಗಳನ್ನು ಆದಷ್ಟು ಬೇಗ ಈಡೇರಿಸಿ ಎಂದು ಆಕೆಯ ಪುತ್ರ ಪ್ರಕಾಶ್‌ ಗೆ ವೈದ್ಯರು ಸಲಹೆ ನೀಡಿದ್ದರು.

ಕೆಲ ದಿನಗಳ ಹಿಂದೆ ಲಲಿತಮ್ಮ ತಾನು ಮಾಜಿ ಸಿಎಂ, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತನಾಡಿಸಬೇಕು ಎಂದರಂತೆ. ಆಕೆಯ ಆಪೇಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಆರೋಗ್ಯ ಸುಧಾರಿಸಲಿ ಎಂದು ಹಾರೈಸಿದ್ದಾರಂತೆ. ಎಚ್ ಡಿಕೆ ಅವರನ್ನು ಭೇಟಿ ಮಾಡಿದ ನಂತರ ಕ್ಯಾನ್ಸರ್ ಪೀಡಿತ ಮಹಿಳೆಯ ಮುಖದಲ್ಲಿ ಒಂದಿಷ್ಟು ಲವ ಲವಿಕೆ ಹೆಚ್ಚಿದೆಯಂತೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಗ್ರಾಮ ವಾಸ್ತವ್ಯದಿಂದಾಗಿ, ತಾನು ಎಂದಾದರೂ ಒಂದು ದಿನ ಕುಮಾರ ಸ್ವಾಮಿ ಅವರನ್ನು ಖುದ್ದು ಭೇಟಿ ಮಾಡಬೇಕೆಂದು ಆಸೆ ಪಟ್ಟಿದ್ದಾಳಂತೆ.

ಆಕೆಯ ಬೇಡಿಕೆಯಂತೆ ಬಳ್ಳಾರಿಯ ಜೆಡಿಎಸ್‍ನ ರಾಜ್ಯ ಯುವ ಘಟಕದ ಕಾರ್ಯದರ್ಶಿ ಕಿರಣ್‍ಕುಮಾರ್ ಇತ್ತೀಚೆಗೆ ಕುಮಾರಸ್ವಾಮಿ ಚಳ್ಳಕೆರೆಗೆ ಬಂದಾಗ ಲಲಿತಮ್ಮನನ್ನು ಭೇಟಿ ಮಾಡಿಸಿದರು. ಆಕೆಯನ್ನು ಭೇಟಿ ಮಾಡಿದ ಕುಮಾರಸ್ವಾಮಿ ನಿಮಗೆ ಏನಾದರೂ ಸಹಕಾರ ಬೇಕೆ ಎಂದು ಕೇಳಿದರೆ , ಏನೂ ಬೇಡ ನಿಮ್ಮನ್ನು ಕಣ್ಣಾರೆ ನೋಡಬೇಕು ಎಂಬ ಆಸೆ ಇತ್ತು ಅದು ಈಡೇರಿದೆ ಅಷ್ಟೇ ಸಾಕು ಎಂದಿದ್ದಾಳೆ ಲಲಿತಮ್ಮ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com