ಕೇವಲ ಬೆಳಗಾವಿ ಜಿಲ್ಲೆಯ ಮತ್ತು ಕರ್ನಾಟಕದ ಬೇರೆ ಜಿಲ್ಲೆಗಳ ರಾಜಕೀಯ ಮುಖಂಡರು ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಿಂದಲೂ ರಾಜಕೀಯ ನಾಯಕರು ಬರುತ್ತಾರೆ. 125 ವರ್ಷಗಳ ಹಳೆಯ ಈ ದೇವಸ್ಥಾನದಲ್ಲಿ ಇತ್ತೀಚೆಗೆ ವಿಶೇಷ ಪೂಜೆ ನಡೆಸುತ್ತಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಹೆಚ್ ಪಟೇಲ್ ಅವರ ಪತ್ನಿ, ಮಾಜಿ ರಾಜ್ಯಪಾಲರುಗಳಾದ ವಿ ಎಸ್ ರಮಾದೇವಿ, ತ್ರಿಲೋಕಿ ನಾಥ್ ಚತುರ್ವೇದಿ ಮೊದಲಾದವರು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.