ಮತದಾನಕ್ಕೂ ಮುನ್ನ ಜಾಗೃತಿ ಮೂಡಿಸುವುದಕ್ಕೂ ಹರಿಹರ ಪುರದ ಮಠ ಕೈ ಜೋಡಿಸಿತ್ತು. ಚುನಾವಣೆ ಸಂದರ್ಭದಲ್ಲಿ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಹರಿಹರಪುರದ ಶ್ರೀಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕಟಣೆ ಬಿಡುಗಡೆ ಮಾಡಿದ್ದ ಮಠ, ಮತದಾನ ಮಾಡಿಯೇ ಕ್ಷೇತ್ರಕ್ಕೆ ಭೇಟಿ ನೀಡಬೇಕೆಂದು ಭಕ್ತಾದಿಗಳಿಗೆ ಕರೆ ನೀಡಿತ್ತು. ಈಗ ಸ್ವತಃ ಸ್ವಾಮಿಗಳು ತಾವೇ ಮೊದಲು ಮತದಾನ ಮಾಡುವ ಮೂಲಕ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಮಾದರಿಯಾಗಿದ್ದಾರೆ.