ಮತದಾನ ದಿನವೇ ಜಿಲ್ಲೆಗೆ 250ಕ್ಕಿಂತ ಹೆಚ್ಚು ಕಾರುಗಳು ಬೆಂಗಳೂರಿನಿಂದ ಬಂದಿದ್ದವು. ನಗರದ ಮುಳ್ಳಯ್ಯನಗಿರಿ ಕಡೆ ಸಾಲುಗಟ್ಟಿ ಹೋಗುತ್ತಿದ್ದ ಕಾರುಗಳಲ್ಲಿದ್ದ ಪ್ರಯಾಣಿಕರಿಗೆ ಶಾಲು ಹಿಡಿದು, ಪೇಪರ್ ಹಾರ ಹಿಡಿದು ಸನ್ಮಾನ ಮಾಡಲು ಸಂಘದವರು ಬಂದಾಗ ಶಾಕ್ ಆದರು. ನಮಗೇಕೆ ಸನ್ಮಾನ, ಶಾಲು ಎಂದು ಪ್ರಶ್ನಿಸುತ್ತಿದ್ದಂತೆ, ನೀವು ವೋಟು ಹಾಕದೆ ಬಂದಿರುವ ಸಾಧನೆ ನೋಡಿ ನಿಮಗೆ ಸನ್ಮಾನ ಮಾಡುತ್ತಿದ್ದೇವೆ ಎಂದಾಗ ಪ್ರವಾಸಿಗರ ಮುಖ ಚಿಕ್ಕದು ಮಾಡಿಕೊಂಡರು. ನಗರದ ಬೇಲೂರು ರಸ್ತೆ, ಮಾಗಡಿ ಚೆಕ್ ಪೋಸ್ಟ್ ಹಾಗೂ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಹೋಗುವ ಕೈಮರದ ಬಳಿ ಪ್ರವಾಸಿಗರ ಕಾರುಗಳನ್ನು ತಡೆದು ಮತದಾನ ಮಾಡಿರುವ ಬಗ್ಗೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ತಪಾಸಣೆ ಅಭಿಯಾನ ಹಮ್ಮಿಕೊಂಡಿತ್ತು.