ಮೋದಿ ಸುನಾಮಿಗೆ ಆರ್ ಜೆಡಿ ತತ್ತರ: ಬಿಹಾರದಲ್ಲಿ ಇದೇ ಮೊದಲ ಬಾರಿ ಖಾತೆ ತೆರೆಯಲೂ ವಿಫಲ!

ರಾಷ್ಟ್ರವ್ಯಾಪಿ ಮೋದಿ ಅಲೆ ಬಿಜೆಪಿಗೆ ಸ್ವತಂತ್ರವಾಗಿ ಸರ್ಕಾರ ರಚಿಸುವುದಕ್ಕೆ ಸಾಧ್ಯವಾಗಿಸಿದೆ. ಈ ನಡುವೆ ವಿಪಕ್ಷಗಳು ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿವೆ.
ಮೋದಿ ಸುನಾಮಿಗೆ ಆರ್ ಜೆಡಿ ತತ್ತರ: ಬಿಹಾರದಲ್ಲಿ ಇದೇ ಮೊದಲ ಬಾರಿ ಖಾತೆ ತೆರೆಯಲೂ ವಿಫಲ!
ಮೋದಿ ಸುನಾಮಿಗೆ ಆರ್ ಜೆಡಿ ತತ್ತರ: ಬಿಹಾರದಲ್ಲಿ ಇದೇ ಮೊದಲ ಬಾರಿ ಖಾತೆ ತೆರೆಯಲೂ ವಿಫಲ!
ಪಾಟ್ನ: ರಾಷ್ಟ್ರವ್ಯಾಪಿ ಮೋದಿ ಅಲೆ ಬಿಜೆಪಿಗೆ ಸ್ವತಂತ್ರವಾಗಿ ಸರ್ಕಾರ ರಚಿಸುವುದಕ್ಕೆ ಸಾಧ್ಯವಾಗಿಸಿದೆ. ಈ ನಡುವೆ ವಿಪಕ್ಷಗಳು ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿವೆ. 
ಬಿಹಾರದಲ್ಲಿಯೂ ಮೋದಿ ಮ್ಯಾಜಿಕ್ ನಡೆದಿದ್ದು, ಎನ್ ಡಿಎಗೆ ಹೆಚ್ಚು ಸ್ಥಾನಗಳು ಸಿಕ್ಕಿದ್ದರೆ, ಆರ್ ಜೆಡಿ ಹೀನಾಯ ಸೋಲು ಕಂಡಿದೆ.  ಮೋದಿ ಅಲೆಗೆ ಸಿಲುಕಿ ತತ್ತರಿಸಿರುವ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ ಜೆಡಿ ಬಿಹಾರದಲ್ಲಿ ಖಾತೆ ತೆರೆಯುವುದಕ್ಕೂ ಸಾಧ್ಯವಾಗಿಲ್ಲ. 
ಕಾಂಗ್ರೆಸ್, ಆರ್ ಜೆಡಿ ಜೊತೆ ಗುರುತಿಸಿಕೊಂಡಿದ್ದ ಆರ್ ಎಲ್ಎಸ್ ಪಿ, ಹೆಚ್ಎಎಂ, ವಿಐಪಿ ಶೂನ್ಯ ಸಾಧನೆ ಮಾಡಿದ್ದು, ಬಿಹಾರದಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಕ್ಲೀನ್ ಸ್ವೀಪ್ ಮಾಡಿವೆ. ಆರ್ ಜೆಡಿ ಸೋಲಿನಿಂದಾಗಿ ಈಗ ಲಾಲು ಪುತ್ರ ತೇಜಸ್ವಿ ಯಾದವ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com