ಪುತ್ತಲಪಟ್ಟು ಮೀಸಲು ಕ್ಷೇತ್ರದ ತೊಡಿಪತ್ರಿಯಲ್ಲಿ ಮತದಾನದ ವೇಳೆ ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮತದಾನದ ವಿಷಯವಾಗಿ ಹೊಡೆದಾಟ ಆರಂಭವಾಗಿ, ಎರಡು ಪಕ್ಷದ ತಲಾ ಓರ್ವ ಕಾರ್ಯಕರ್ತರು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಸತ್ತೆನಪಲ್ಲೆ ಕ್ಷೇತ್ರದ ಇನುಮೆಟ್ಲ ಗ್ರಾಮದಲ್ಲಿ ವೈಎಸ್ಆರ್ ಸಿಪಿ ಕಾರ್ಯಕರ್ತರ ದಾಳಿಯಿಂದಾಗಿ ಸಭಾಪತಿ ಡಾ ಕೊಡೆಲಾ ಶಿವಪ್ರಸಾದ್ ರಾವ್ ತಲೆಸುತ್ತಿ ಬಿದ್ದರು.ಅವರ ಮೇಲೆ ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರು ರಾಡ್ ನಿಂದ ಹಲ್ಲೆ ಮಾಡಿದ್ದರು.