ಪಾಕಿಸ್ತಾನದಲ್ಲಿ ಜೈ ಶ್ರೀ ರಾಮ್ ಮಂತ್ರ ಪಠಿಸಬೇಕಾ? ಅಮಿತ್ ಶಾ

ಭಾರತದಲ್ಲಿ ಶ್ರೀರಾಮ ಜಪ ಮಾಡಲು ಆಗುತ್ತಿಲ್ಲವೆಂದರೆ ಪಾಕಿಸ್ತಾನದಲ್ಲಿ ಪಠಿಸಬೇಕಾ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ಪಶ್ಚಿಮ ಬಂಗಾಳ:  ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ ಮಂತ್ರ ಪಠಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಭಾರತದಲ್ಲಿ ಶ್ರೀರಾಮ ಜಪ ಮಾಡಲು ಆಗುತ್ತಿಲ್ಲವೆಂದರೆ ಪಾಕಿಸ್ತಾನದಲ್ಲಿ  ಪಠಿಸಬೇಕಾ ? ಎಂದು ಪ್ರಶ್ನಿಸಿದ್ದಾರೆ

ಪಶ್ಚಿಮ ಬಂಗಾಳದ ವಿವಿಧೆಡೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಜೈ ಶ್ರೀ ರಾಮ ಮಂತ್ರ ಪಠಿಸುತ್ತಿರುವ ತಮನ್ನು ಮಮತಾ ಬ್ಯಾನರ್ಜಿ ಬಂಧಿಸುವ ಭಯವಿದೆ ಎಂದು ಹೇಳಿದ್ದಾರೆ.

ಬಿಷ್ಣುಪುರ, ಘಾಟಲ್ ಮತ್ತಿತರ ಕಡೆಗಳಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಿದ ಅಮಿತ್ ಶಾ, ಶ್ರೀ  ರಾಮ ಭಾರತ ಸಂಸ್ಕೃತಿಯ ಭಾಗವಾಗಿದ್ದು, ಅವರ ಹೆಸರು ಹೇಳದಂತೆ ಜನರನ್ನು ಯಾರಾದರೂ ತಡೆಯುತ್ತಾರೆಯೇ ಎಂದು ಪ್ರಶ್ನಿಸಿದರು.
ಭಾರತದಲ್ಲಿ ಶ್ರೀರಾಮನ ಹೆಸರು ಹೇಳುವುದಕ್ಕೆ ಆಗುವುದಿಲ್ಲ ಎಂದರೆ ಪಾಕಿಸ್ತಾನದಲ್ಲಿ ಹೇಳುವುದಕ್ಕೆ ಆಗುತ್ತದೆಯಾ ಎಂದು ಮಮತಾ ಬ್ಯಾನರ್ಜಿ ಅವರನ್ನು ಕೇಳಲು ಇಷ್ಟಪಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com