ಸಕ್ಕರೆ ನಾಡು ಮಂಡ್ಯದ ಮೇಲೆ ಇಡೀ ಇಂಡಿಯಾದ ಗಮನ ನೆಟ್ಟಿರುವು ಅಚ್ಚರಿಯೇನಲ್ಲ, ದೇವೇಗೌಡರ ಕುಟುಂಬ ಹಾಗೂ ಹಿರಿಯ ನಟ ಅಂಬರೀಶ್ ವಂಶದ ನಡುವೆ ನಡೆಯುತ್ತಿರುವ ಫೈಟ್ ಇದಾಗಿದೆ, ದುರಾದೃಷ್ಟವಶಾತ್ ಎರಡು ಅಭ್ಯರ್ಥಿಗಳ ಪ್ರಚಾರದಲ್ಲಿ ಪ್ರಚಲಿತ ಸಮಸ್ಯೆಗಳನ್ನು ಗಂಬೀರವಾಗಿ ತೆಗೆದುಕೊಂಡಿಲ್ಲ, ರೈತರ ಆತ್ಮಹತ್ಯೆ, ಕಾರ್ಮಿಕರ ವಲಸೆ, ಕಬ್ಬಿಗೆ ಸೂಕ್ತ ಬೆಲೆ ಇದ್ಯಾವುದರ ಬಗ್ಗೆಯೂ ಎಲ್ಲಿಯೂ ಚರ್ಚೆಯಾಗಲಿಲ್ಲ, ಕೇವಲ ವಯಕ್ತಿಕ ನಿಂದನೆ, ಪ್ರತಿಷ್ಠೆಯನ್ನು ಪರಿಗಣಿಸಲಾಗಿದೆ.