ಮಂಡ್ಯ ರಣಕಣ: ಸುಮಲತಾ ಅಂಬರೀಶ್‌ಗೆ ಸಂಕಷ್ಟ, ಡಿಸಿ ನೋಟಿಸ್

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪ್ರಭಾವ ಬಳಸಿ ನಿಖಿಲ್ ಕುಮಾರ್ ನಾಮಪತ್ರದಲ್ಲಿನ ತಪ್ಪನ್ನು ಮುಚ್ಚಿಡೋಕೆ ಯತ್ನಿಸಿದ್ದಾರೆ ಎಂದು ಪಕ್ಷೇತರ ಸುಮಲತಾ ಆರೋಪಿಸಿದ್ದು...
ಸುಮಲತಾ ಅಂಬರೀಶ್
ಸುಮಲತಾ ಅಂಬರೀಶ್
ಮಂಡ್ಯ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪ್ರಭಾವ ಬಳಸಿ ನಿಖಿಲ್ ಕುಮಾರ್ ನಾಮಪತ್ರದಲ್ಲಿನ ತಪ್ಪನ್ನು ಮುಚ್ಚಿಡೋಕೆ ಯತ್ನಿಸಿದ್ದಾರೆ ಎಂದು ಪಕ್ಷೇತರ ಸುಮಲತಾ ಆರೋಪಿಸಿದ್ದು ಈ ಸಂಬಂಧ ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.
ಸುಮಲತಾ ಅಂಬರೀಶ್ ಅವರು ಜಿಲ್ಲಾಡಳಿತ ಮೇಲೆ ಅಪನಂಬಿಕೆ ಬರುವಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಕಾರಣಕ್ಕೆ ನೋಟಿಸ್ ನೀಡಲಾಗಿದೆ. ಐಪಿಸಿ ಸೆಕ್ಷನ್ 189ರಡಿ ನೋಟಿಸ್ ಜಾರಿ ಮಾಡಿದ ಡಿಸಿ ಮಂಜುಶ್ರೀ ಒಂದು ದಿನದೊಳಗೆ ಸಮಜಾಯಿಷಿ ಕೊಡದಿದ್ದರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಿಖಿಲ್ ನಾಮಪತ್ರದಲ್ಲಿ ತಪ್ಪುಗಳಿವೆ. ಈ ತಪ್ಪುಗಳನ್ನು ಮುಚ್ಚಿಡೋಕೆ ಯತ್ನಿಸಲಾಗಿದೆ. ಅಲ್ಲದೆ ಸಿಎಂ ಡಿಸಿಯವರು ಮನೆಗೆ ಕರೆಸಿಕೊಂಡು ಮಾತನಾಡಿದ್ದಾರೆಂಬ ಮಾಹಿತಿ ನನಗೆ ಸಿಕ್ಕಿದೆ. ಇಟ್ ಇಸ್ ಟೋಟಲ್ ಬ್ರೇಕಿಂಗ್ ಆಫ್ ಲಾ, ಇದು ಎಲ್ಲು ನಡೆಯಲ್ಲ ಎಂಬ ಸುಮಲತಾ ಹೇಳಿಕೆ ಆಧಾರದ ಮೇಲೆ ಈ ನೋಟಿಸ್ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com