ಅಭಿಶೇಕ್-ದರ್ಶನ್-ಸುಮಲತಾ ಅಂಬರೀಶ್-ಯಶ್
ಅಭಿಶೇಕ್-ದರ್ಶನ್-ಸುಮಲತಾ ಅಂಬರೀಶ್-ಯಶ್

ಸುಮಲತಾಗೆ ಕೈಕೊಟ್ಟ ಅದೃಷ್ಟ, ಬಯಸಿದ್ದ ಚಿಹ್ನೆ ಬದಲಿಗೆ 'ಕಹಳೆ' ಚಿಹ್ನೆ ಸಿಕ್ತು!

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಗೆ ಸೆಡ್ಡು ಹೊಡೆದು ಚಿಹ್ನೆ ಆಯ್ಕೆಗೆ ಮುಂದಾಗಿದ್ದರು. ಆದರೆ ಅದೃಷ್ಟ ಕೈಕೊಟ್ಟಿದ್ದು ತಾವು ಕೇಳಿದ ಚಿಹ್ನೆ...
ಮಂಡ್ಯ: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಗೆ ಸೆಡ್ಡು ಹೊಡೆದು ಚಿಹ್ನೆ ಆಯ್ಕೆಗೆ ಮುಂದಾಗಿದ್ದರು. ಆದರೆ ಅದೃಷ್ಟ ಕೈಕೊಟ್ಟಿದ್ದು ತಾವು ಕೇಳಿದ ಚಿಹ್ನೆ ಬದಲಿಗೆ ಬೇರೆ ಚಿಹ್ನೆ ಸಿಕ್ಕಿದೆ.
ಚುನಾವಣಾ ಆಯೋಗ ಸುಮಲತಾ ಅವರಿಗೆ ತಳ್ಳುವ ಗಾಡಿ ಬದಲಿಗೆ ಕಹಳೆ ಊದುತ್ತಿರುವ ವ್ಯಕ್ತಿಯನ್ನು ಚಿಹ್ನೆಯನ್ನಾಗಿ ನೀಡಿದೆ. ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಂತಿಮವಾಗಿ ಚಿಹ್ನೆ ನಿಗದಿ ಮಾಡಲಾಗಿದೆ. 
ಸುಮಲತಾ ಚುನಾವಣಾ ಏಜೆಂಟ್ ಮದನ್ ಸಮ್ಮುಖದಲ್ಲಿ ಚಿಹ್ನೆ ನಿಗದಿ ಮಾಡಲಾಯಿತು. ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಿಹ್ನೆ ಅಂತಿಮಗೊಳಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com