ಕಬ್ಬಿನ ಬೆಳೆಗಾರ ಸಮಸ್ಯೆ, ಹೈನುಗಾರರ ಸಮಸ್ಯೆ, ಮಹಿಳೆಯರು, ಯುವಕರ ನಿರುದ್ಯೋಗ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚುನಾವಣೆಯಲ್ಲಿ ಚರ್ಚೆಯಾಗಬೇಕಿದೆ. ಕಾವೇರಿ ವಿಚಾರ, ರೈತರ ಸಮಸ್ಯೆ ಬಗ್ಗೆ ದನಿ ಎತ್ತಬೇಕಿದೆ. ಮಹಿಳೆಯರು ಉದ್ಯೋಗದ ಸಮಸ್ಯೆ ಎದುರಿಸುತ್ತಿದ್ದು ಸ್ಥಳೀಯವಾಗಿಯೇ ಗಾರ್ಮೆಂರ್ಟ್ಸ್ ,ಸ್ಟಾರ್ಟ್ ಅಪ್ ಗಳು ಸೇರಿದಂತೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ ಎಂದ ಸುಮಲತಾ, ತಮಗೆ ಏಳು ವರ್ಷ ವಯಸ್ಸಾಗಿದ್ದಾಗ ತಂದೆ ತೀರಿಕೊಂಡರು. ಐದು ಮಕ್ಕಳನ್ನು ಅವರ ತಾಯಿಯೇ ಸಾಕಿ ಸಲಹಿ, ವಿದ್ಯೆ ಕಲಿಸಿ, ಸಮಾಜದಲ್ಲಿ ಬದುಕುವ ಕಲೆಯನ್ನು ಕಲಿಸಿದರು ಎಂದರು. ಕೇವಲ ೧೦ನೇ ತರಗತಿವರೆಗೆ ಕಲಿಯಲು ಸಾಧ್ಯವಾಯಿತು. ಆದರೆ ಬದುಕು ಸಾಕಷ್ಟು ಕಲಿಸಿದೆ ಎಂದು ತಮ್ಮ ಬಾಲ್ಯದ ಕಷ್ಟದ ಜೀವನವನ್ನು ಸ್ಮರಿಸಿದರು..