ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಪರ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಖರ್ಗೆ ಅವರ ರಾಜಕೀಯ ಅನುಭವ ಜನಪರ ಹೋರಾಟ ಹಾಗೂ ಹಿನ್ನೆಲೆ ನೋಡಿದರೆ ಅವರು ಯಾವೊತ್ತೋ ಸಿಎಂ ಆಗಬೇಕಿತ್ತು. ಆದರೆ ಕೆಲ ರಾಜಕೀಯ ನಿರ್ಧಾರಗಳಿಂದ ಅವರು ಸಿಎಂ ಆಗಲಿಲ್ಲ ಎನ್ನುವ ನೋವು ನಮಗೂ ಇದೆ ಎಂದು ಹೇಳಿದರು.