ಮೊಮ್ಮಕ್ಕಳನ್ನು ದಡ ಸೇರಿಸಲು ಹೋಗಿ ಗೌಡರು ಎಡವಿದರು: ಎ ಮಂಜು

ಮೊಮ್ಮಕ್ಕಳ ಮೇಲಿನ ವ್ಯಾಮೋಹದಿಂದ ಅವರನ್ನು ರಾಜಕೀಯದಲ್ಲಿ ದಡ ಸೇರಿಸಲು ಹೋಗಿ ಮಾಜಿ ...
ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ಎ ಮಂಜು
ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ಎ ಮಂಜು
ಹಾಸನ: ಮೊಮ್ಮಕ್ಕಳ ಮೇಲಿನ ವ್ಯಾಮೋಹದಿಂದ ಅವರನ್ನು ರಾಜಕೀಯದಲ್ಲಿ ದಡ ಸೇರಿಸಲು ಹೋಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಎಡವಿದ್ದಾರೆ ಎಂದು ಹಾಸನ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಮಂಜು ಪ್ರತಿಕ್ರಿಯಿಸಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸೋಲಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹಾಸನದಿಂದ ಸ್ಪರ್ಧಿಸಲಿ ಎಂದು ನಾನೇ ಆಹ್ವಾನ ನೀಡಿದ್ದೆ. ಆದರೆ, ಕಾಂಗ್ರೆಸ್-ಜೆಡಿಎಸ್ ನಲ್ಲಿ ಮೈತ್ರಿ ನಡುವೆ ಮೊಮ್ಮಕ್ಕಳನ್ನು ದಡ ಸೇರಿಸಲು ಹೋಗಿ ತಾವೇ ಎಡವಿದ್ದಾರೆ. ಇದಕ್ಕೆ ತುಮಕೂರಿನಲ್ಲಿ ಅವರು ಮತ್ತು ಮಂಡ್ಯದಲ್ಲಿ ಅವರ ಮೊಮ್ಮಗ ಹಿನ್ನಡೆ ಕಂಡಿರುವುದೇ ಸಾಕ್ಷಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com