ಹಾಸನ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸೋಲಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹಾಸನದಿಂದ ಸ್ಪರ್ಧಿಸಲಿ ಎಂದು ನಾನೇ ಆಹ್ವಾನ ನೀಡಿದ್ದೆ. ಆದರೆ, ಕಾಂಗ್ರೆಸ್-ಜೆಡಿಎಸ್ ನಲ್ಲಿ ಮೈತ್ರಿ ನಡುವೆ ಮೊಮ್ಮಕ್ಕಳನ್ನು ದಡ ಸೇರಿಸಲು ಹೋಗಿ ತಾವೇ ಎಡವಿದ್ದಾರೆ. ಇದಕ್ಕೆ ತುಮಕೂರಿನಲ್ಲಿ ಅವರು ಮತ್ತು ಮಂಡ್ಯದಲ್ಲಿ ಅವರ ಮೊಮ್ಮಗ ಹಿನ್ನಡೆ ಕಂಡಿರುವುದೇ ಸಾಕ್ಷಿ ಎಂದರು.