2014ರಲ್ಲಿ ಬಿಜೆಪಿ, ಬಿಜಾಪುರ ಮತ್ತು ಬಳ್ಳಾರಿ ಮೀಸಲು ಕ್ಷೇತ್ರಗಳನ್ನು ಮಾತ್ರ ಗೆದ್ದಿತ್ತು. ಆದರೆ ಈ ಬಾರಿ ಎಲ್ಲಾ ಏಳು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದೆ. ಬಿಜಾಪುರ ಕ್ಷೇತ್ರದಿಂದ ರಮೇಶ್ ಜಿಗಜಿಣಗಿ, ಚಿತ್ರದುರ್ಗದಿಂದ ಎ ನಾರಾಯಣ ಸ್ವಾಮಿ, ಚಾಮರಾಜನಗರದಿಂದ ವಿ ಶ್ರೀನಿವಾಸಪ್ರಸಾದ್, ಕೋಲಾರದಿಂದ ಮುನಿಸ್ವಾಮಿ, ಕಲಬುರಗಿಯಿಂದ ಡಾ ಉಮೇಶ್ ಜಾಧವ್ ಗೆದ್ದಿದ್ದು, ಇವೆಲ್ಲವೂ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಾಗಿವೆ.