ಬಾಳೆಹಣ್ಣು, ಆಲೂಗಡ್ಡೆಯಲ್ಲಿರುವ ಪಿಷ್ಠ ಆರೋಗ್ಯಕ್ಕೆ ಒಳ್ಳೆಯದು ಏಕೆ?

ಆಲೂಗಡ್ಡೆ ಎಂದಾಕ್ಷಣ ಇಷ್ಟವಿದ್ದರೂ ಅದು ಅನಾರೋಗ್ಯ ಎಂದು ಹೇಳಿ ದೂರ ಹೋಗುವ ಜನರ ಸಂಖ್ಯೆಯೇ ಹೆಚ್ಚು. ಆದರೆ, ಆಲೂಗಡ್ಡೆಯಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಪ್ರತೀನಿತ್ಯ ಹಣ್ಣುಗಳನ್ನು ತಿನ್ನುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು...
ಬಾಳೆಹಣ್ಣು (ಸಂಗ್ರಹ ಚಿತ್ರ)
ಬಾಳೆಹಣ್ಣು (ಸಂಗ್ರಹ ಚಿತ್ರ)

ಲಂಡನ್: ಆಲೂಗಡ್ಡೆ ಎಂದಾಕ್ಷಣ ಇಷ್ಟವಿದ್ದರೂ ಅದು ಅನಾರೋಗ್ಯ ಎಂದು ಹೇಳಿ ದೂರ ಹೋಗುವ ಜನರ ಸಂಖ್ಯೆಯೇ ಹೆಚ್ಚು. ಆದರೆ, ಆಲೂಗಡ್ಡೆಯಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಪ್ರತೀನಿತ್ಯ ಹಣ್ಣುಗಳನ್ನು ತಿನ್ನುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಮುಖ್ಯವಾಗಿ ಬಾಳೆಹಣ್ಣು ಮತ್ತು ಆಲೂಗಡ್ಡೆ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಆಲೂಗಡ್ಡೆಯು ಆರೋಗ್ಯ ಮತ್ತು ಸೌಂದರ್ಯವರ್ಧಕವೂ ಹೌದು, ಆಲೂಗಡ್ಡೆಯಲ್ಲಿ ಕೊಬ್ಬಿನಾಂಶವು ಶೂನ್ಯವಾಗಿರುತ್ತದೆ. ಆಲೂಗಡ್ಡೆಯಲ್ಲಿ ಪೊಟ್ಯಾಷಿಯಮ್, ಮೆಗ್ನೀಷಿಯಮ್, ತಾಮ್ರ, ಕ್ಯಾಲ್ಷಿಯಂ, ಸತು ಮುಂತಾ ಅಂಶವಿದ್ದು, ಇದು ದೇಹಕ್ಕೆ ಕಬ್ಬಿಣದ ಅಂಶವನ್ನು ಒದಗಿಸುತ್ತದೆ. ವಾರಕ್ಕೆರಡು ಬಾರಿಯಾಲೂ ಆಲೂಗಡ್ಡೆಯನ್ನು ಬೇಯಿಸಿ ವಿವಿಧ ಖಾದ್ಯಗಳನ್ನು ತಯಾರಿಸಿ ತಿಂದರನೆ ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳೆಲ್ಲವೂ ದೊರೆಯುತ್ತದೆ. ಅಲ್ಲದೆ, ಆಲೂವಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಲೂ ಸಹಕಾರಿಯಾಗಿದೆ.

ಸಕ್ಕರೆ ಕಾಯಿಲೆ ಇರುವವರು ಬಾಳೆಹಣ್ಣನ್ನು ತಮ್ಮ ಮಿತಿಯಲ್ಲಿ ತಿಂದಾಗ ಅದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಬಾಳೆಹಣ್ಣಿನಲ್ಲಿ ಗ್ರೂಕೋಸ್, ಪ್ರಕ್ಟೋಸ್ ಮತ್ತು ಸುಕ್ರೋಸ್ ಎಂಬ ಅಂಶಗಳು ಹೆಚ್ಚಾಗಿರುತ್ತದೆ. ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ (ಪಿಷ್ಠ)ಹೆಚ್ಚಾಗಿರುವುದರಿಂದ ಇದು ಕಡಿಮೆ ಅವಧಿಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚು ಮಾಡುತ್ತದೆ. ತಿನ್ನುವ ಬಾಳೆಹಣ್ಣು ಗಾತ್ರದ ಮೇಲೆ ಅವಲಂಬಿತವಾಗಿದ್ದು, ಗಾತ್ರ ಕಡಿಮೆ ಇದ್ದಷ್ಟು ಅದು ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ. ಸಕ್ಕರೆ ಕಾಯಿಲೆಯಿರುವವರು ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸಬಹುದು. ಆದರೆ, ಮಿಲ್ಕ್ ಶೇಕ್ ನಂತಹ ಪದಾರ್ಥಗಳನ್ನು ಕುಡಿಯಬಾರದು. ಏಕೆಂದರೆ ಇವುಗಳಲ್ಲಿ ಕ್ಯಾಲೋರಿಗಳು ಹೆಚ್ಚಾಗಿ ಸೇರ್ಪಡೆಗೊಂಡಿರುವುದರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಬಾಳೆಹಣ್ಣು ಹಾಗೂ ಆಲೂಗಡ್ಡೆಯಲ್ಲಿರುವ ಪಿಷ್ಟ ಕುರಿತಂತೆ ಬ್ರಿಟನ್ ಮೂಲದ ಸಂಸ್ಥೆಯೊಂದು ಅಧ್ಯಯನ ನಡೆಸಿದೆ. ಬಾಳೆ ಹಣ್ಣು ಮತ್ತು ಆಲೂಗಡ್ಡೆಯಲ್ಲಿ ಹೆಚ್ಚಳವಾಗಿ ಕಾರ್ಬೋಹೈಡ್ರೇಟ್ (ಪಿಷ್ಠ) ಇದ್ದು, ಇವುಗಳನ್ನು ಪ್ರತೀನಿತ್ಯ ಸೇವನೆ ಮಾಡುವುದರಿಂದ ಅದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ.

ಮನುಷ್ಟ ಪ್ರತೀನಿತ್ಯ ಫೈಬರ್ ಅಂಶ ಇರುವ ಆಹಾರವನ್ನು ಸೇವಿಸಬೇಕು. ಪ್ರಮುಖವಾಗಿ ದಿನಕ್ಕೆ ಒಬ್ಬ ವ್ಯಕ್ತಿ 30 ಗ್ರಾಂನಷ್ಟಾದರೂ ಫೈಬರ್ ಅಂಶ ಇರುವ ಆಹಾರ ಸೇವಿಸಬೇಕು. ಇದು ಮನುಷ್ಯ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಅಲ್ಲದೆ, ಸಮತೋಲನವನ್ನು ಕಾಪಾಡುತ್ತದೆ. ಇದರಿಂದ ದೀರ್ಘಕಾಲಿಕ ರೋಗದಿಂದ ದೂರಇರಡಲು ಸಹಾಯ ಮಾಡುತ್ತದೆ ಎಂದು ಬ್ರಿಟಿಷ್ ನ್ಯೂಟ್ರಿಷನ್ ಫೌಂಡೇಶನ್ನ ನ್ಯೂಟ್ರಿಷನ್ ವಿಜ್ಞಾನಿ ಸ್ಟಾಸಿ ಲಾಕ್'ಯೆರ್ ಅವರು ಹೇಳಿದ್ದಾರೆ.

ಕಾರ್ಬೋಹೈಡ್ರೇಟ್ (ಪಿಷ್ಠ) ಇರುವಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ ಅದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿಯಾಗಿದೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಅಲ್ಲದೆ, ಕರುಳಿನ ಆರೋಗ್ಯ ಇದು ಸಹಕಾರಿಯಾಗಲಿದೆ ಎಂದು ಸ್ಟಾಸಿ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com