ಜೆಎನ್ ಯು ಸಂಸ್ಕೃತ ಕೇಂದ್ರದಿಂದ ಇದೇ ಮೊದಲ ಬಾರಿಗೆ ಇಂತಹ ಸಂಶೋಧನೆ ನಡೆದಿದೆ ಎಂದು ಜೆಎನ್ ಯು ನಲ್ಲಿರುವ ವೈದಿಕ ಸಾಹಿತ್ಯದ ಪ್ರೊಫೇಸರ್ ಸುಧೀರ್ ಕುಮಾರ್ ಆರ್ಯ ಹೇಳಿದ್ದಾರೆ. ಭಾರತದ ಹಲವು ಪುರಾಣಗಳನ್ನು ಆಧಾರವಾಗಿಟ್ಟುಕೊಂಡು ಸಂಶೋಧನೆ ನಡೆಸಲಾಗಿದ್ದು, ಸಣ್ಣ ವಯಸ್ಸಿನಿಂದಲೇ ನೈತಿಕ ಮೌಲ್ಯಗಳನ್ನು ಕಲಿತವರು ಆತಂಕ, ಒತ್ತಡ, ಖಿನ್ನತೆಗೀಡಾಗುವುದಿಲ್ಲ ಎಂದು ವರದಿ ಹೇಳಿದೆ.