ನಿಯಮ ಉಲ್ಲಂಘನೆ: 100 ರು. ದಂಡ ವಿಧಿಸಿದ ಪೊಲೀಸರಿಗೆ ಸೈನಿಕರಿಂದ ಹಲ್ಲೆ

ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ 100 ರುಪಾಯಿ ದಂಡ ವಿಧಿಸಿದ ಸಂಚಾರಿ ಪೊಲೀಸರಿಗೆ ಸೈನಿಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ...
ಎಸ್ಐ ಕೃಷ್ಣಮೂರ್ತಿ
ಎಸ್ಐ ಕೃಷ್ಣಮೂರ್ತಿ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ 100 ರುಪಾಯಿ ದಂಡ ವಿಧಿಸಿದ ಸಂಚಾರಿ ಪೊಲೀಸರಿಗೆ ಸೈನಿಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಶಿವಾಜಿನಗರ ಎಸ್ಐ ಕೃಷ್ಣಮೂರ್ತಿ ಪೇದಗಳಾದ ಸುಧೀಂದ್ರ ಹಾಗೂ ವೆಂಕಟೇಶ್ ಮೂವರು ಕಬ್ಬನ್ ರಸ್ತೆಯಲ್ಲಿ ಸಂಚಾರ ನಿಯಂತ್ರಣ ಮಾಡುತ್ತಿದ್ದರು. ಈ ವೇಳೆ ಕಾಮರಾಜ ರಸ್ತೆಯಲ್ಲಿನ ಸೇನಾ ತರಬೇತಿ ಕೇಂದ್ರದ ಕ್ಯಾಪ್ಟನ್ ಚಂದ್ರು, ಯೋಧ ಕೆಬಿ ಸಿಂಗ್ ಸಂಜೆ 5.30ರ ಸುಮಾರಿನಲ್ಲಿ ಬೈಕ್ ನಲ್ಲಿ ಕಾಮರಾಜ ರಸ್ತೆಗೆ ತೆರಳುತ್ತಿದ್ದರು.

ಒನ್ ವೇಯಲ್ಲಿ ಬೈಕ್ ಚಲಾಯಿಸುತ್ತಿದ್ದ ಯೋಧನನ್ನು ಸಂಚಾರಿ ಪೊಲೀಸ್ ಸಿಬ್ಬಂದಿಗಳು ತಡೆದು 100 ರುಪಾಯಿ ದಂಡ ಕಟ್ಟಲು ಸೂಚಿಸಿದ್ದಾರೆ. ದಂಡದ ಕಟ್ಟಲು ಒಪ್ಪದ ಯೋಧ ಹಾಗೂ ಪೊಲೀಸರ ನಡುವೆ ಜಗಳ ನಡೆದಿದೆ. ಬಳಿಕ ದಂಡ ಪಾವತಿಸಿ ತೆರಳಿದ ಯೋಧರು ಬಳಿಕ 20 ಸಿಬ್ಬಂದಿ ಜತೆ ಜಂಕ್ಷನ್ ಗೆ ಬಂದು ಕರ್ತವ್ಯ ನಿರತ ಎಸ್ಐ ಮತ್ತು ಇಬ್ಬರು ಪೇದೆಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಪೊಲೀಸರು ಹಾಗೂ ಯೋಧರ ನಡುವಿನ ಜಗಳದಿಂದಾಗಿ ಕಾಮರಾಜ ರಸ್ತೆ ಜಂಕ್ಷನ್ ನಲ್ಲಿ 1 ಗಂಟೆ ಕಾಲ ಆಂತಕದ ವಾತಾವರಣ ನಿರ್ಮಾಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com