ಬೆಂಗಳೂರು: ಮೊಬೈಲ್ ಒಡೆದು ಹಾಕಿದ್ದಕ್ಕೆ ಅಜ್ಜಿಯನ್ನೇ ಕೊಂದ ಮೊಮ್ಮಗ

ತಿಳಿಯದೆಯೇ ಮೊಬೈಲ್ ಒಡೆದು ಹಾಕಿದ್ದಕ್ಕೆ ಅಕ್ರೋಶಗೊಂಡ ಮೊಮ್ಮಗನೊಬ್ಬ ಹೊಡೆದು ಅಜ್ಜಿಯನ್ನು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ಬನಶಂಕರಿಯ ಕದಿರೇನಹಳ್ಳಿಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಿಳಿಯದೆಯೇ ಮೊಬೈಲ್ ಒಡೆದು ಹಾಕಿದ್ದಕ್ಕೆ ಅಕ್ರೋಶಗೊಂಡ ಮೊಮ್ಮಗನೊಬ್ಬ ಹೊಡೆದು ಅಜ್ಜಿಯನ್ನು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ಬನಶಂಕರಿಯ ಕದಿರೇನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಲಕ್ಷ್ಮಮ್ಮ (99) ಕೊಲೆಯಾದ ಅಜ್ಜಿ. ಶಿವರಾಜ್ (22) ಹತ್ಯೆ ಮಾಡಿದ ಮೊಮ್ಮಗನಾಗಿದ್ದಾನೆ. ಘಟನೆ ನಂತರ ಶಿವರಾಜ್ ತಲೆಮರೆಸಿಕೊಂಡಿದ್ದಾನೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಶಿವರಾಜ್ ನಿನ್ನೆ ರಾತ್ರಿ 8ರ ಸುಮಾರಿಗೆ ಮನೆಗೆ ಬಂದು ಮೊಬೈಲ್ ನ್ನು ಚಾರ್ಜ್ ಹಾಕಿ ಕುಳಿತುಕೊಂಡಿದ್ದಾನೆ. ಈ ವೇಳೆ ಕೋಲು ಹಿಡಿದುಕೊಂಡು ಬಂದಿದ್ದ ಅಜ್ಜಿಯ ಕೋಲಿಗೆ ಚಾರ್ಜರ್ ವೈಯರ್ ಸಿಕ್ಕಿಹಾಕಿಕೊಂಡಿದೆ. ಇದರಂತೆ ಮೊಬೈಲ್ ಕಳಗೆ ಬಿದ್ದು ಒಡೆದುಹೋಗಿದೆ.

ಮೊಬೈಲ್ ಒಡೆದು ಹೋಗಿದ್ದಕ್ಕೆ ಅಕ್ರೋಶಗೊಂಡ ಶಿವರಾಜ್ ಕೋಲು ತೆಗೆದುಕೊಂಡು ಅಜ್ಜಿಯ ಕತ್ತಿಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಅಜ್ಜಿಯನ್ನು ಮನೆಯವರೇ ರಕ್ತ ಒರೆಸಿ ಶುಶ್ರೂಷೆ ಮಾಡಿ ಔಷಧಿಯನ್ನು ಹಾಕಿ ಮಲಗಿಸಿದ್ದಾರೆ. ಮಲಗಿದ್ದ ಜಾಗದಲ್ಲೇ ಲಕ್ಷ್ಮಮ್ಮ ಅವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ಶಿವರಾಜ್ ಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com