"ರಸ್ತೆಗುಂಡಿ ದುರಸ್ತಿ ಹಗರಣವಾಗಿದೆ. ಈ ತೊಂದರೆಯನ್ನು ನಿವಾರಿಸಲು ಬಿಬಿಎಂಪಿ ಬಳಿ ಸರಿಯಾದ ಯೋಜನೆಯಿಲ್ಲ. ಹಾಗೆಯೇ, ಟೆಂಡರ್ ಕರೆಯಲು ಹೆಚ್ಚೆಚ್ಚು ಗುಂಡಿಗಳಾಗುವವರೆಗೂ ಬಿಬಿಎಂಪಿ ಕಾಯುತ್ತದೆ. ಕಾರ್ಪೊರೇಟರ್ ಗಳು ಒಂದಾಗಿ ಪೈಥಾನ್ ಬಳಕೆ ತಡೆಯಲು ಮೇಯರ್ ಬಳಿ ಹೋಗಿದ್ದಾರೆ. ಅವರು ಈ ಯಂತ್ರದ ಬಳಕೆ ನಿಷೇಧಿಸಿ ತನಿಖೆಗೆ ಆದೇಶಿಸಿದ್ದಾರೆ" ಎನ್ನುತ್ತಾರೆ ನಗರ ಅಭಿವೃದ್ಧಿ ತಜ್ಞ ಆರ್ ಕೆ ಮಿಶ್ರಾ.