ಮೈಸೂರು: ನವ ವರನೊಬ್ಬ ಆಷಾಢಕ್ಕೆ ತನ್ನ ಪತ್ನಿಯನ್ನು ತವರು ಮನೆಗೆ ಕಳುಹಿಸಿ ಆಕೆಯ ಸ್ನೇಹಿತೆಯನ್ನು ಮದುವೆಯಾಗಿದ್ದಾನೆ.
ಮೈಸೂರಿನ ಕೆಆರ್ ನಗರ ಅಗ್ರಹಾರದ ನಿವಾಸಿ 27 ವರ್ಷದ ಅನಿಲ್ ಕಳೆದ ಜೂನ್ ನಲ್ಲಿ ಕಾವ್ಯ ಎಂಬುವರೊಂದಿಗೆ ವಿವಾಹವಾಗಿದ್ದರು, ಮದುವೆ ನಂತರ ಕಾವ್ಯಳ ಜತೆ ಬಂದಿದ್ದ ಬಾಲಕಿ ಮೇಲೆ ಅನಿಲ್ ಕಣ್ಣು ಹಾಕಿದ್ದಾನೆ. ಆಷಾಢ ಬಂದ ಹಿನ್ನೆಲೆ ಕಾವ್ಯ ತವರಿಗೆ ಹೋದ ನಂತರ ಅನಿಲ್ ಬಾಲಕಿ ಜತೆ ವಿವಾಹವಾಗಿದ್ದಾನೆ.
ಭೀಮನ ಅಮಾವಾಸ್ಯೆ ಬಳಿಕ ಪತ್ನಿಯನ್ನು ಕಾಣಲು ಗ್ರಾಮಕ್ಕೆ ಬಂದ ಅನಿಲ್ ಗ್ರಾಮದ ಹೊರಭಾಗಕ್ಕೆ ಬಾಲಕಿಯನ್ನು ಕರೆಸಿಕೊಂಡು ನೇರವಾಗಿ ಆಕೆಯನ್ನು ಶಿವಮೊಗ್ಗ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ಬಾಲಕಿ ಕಾಣೆಯಾಗಿದ್ದು ಆಕೆ ಅನಿಲ್ ಜತೆ ಹೋಗಿರುವುದಾಗಿ ತಿಳಿದ ಗ್ರಾಮಸ್ಥರು ಶಿವಮೊಗ್ಗಕ್ಕೆ ಹೋದಾಗ ಬಾಲಕಿಯ ಕತ್ತಲ್ಲಿ ತಾಳಿ ನೋಡಿ ಗಾಬರಿಗೊಂಡಿದ್ದಾರೆ.
ಇದರಿಂದ ಕೋಪಗೊಂಡ ಕಾವ್ಯ ಪೋಷಕರು ಅನಿಲ್ ನನ್ನು ಕೆಆರ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.