ಪ್ರವೀಣ್ ಪೂಜಾರಿ ಹತ್ಯೆ: 11 ಬಂಧನ

ಗೋರಕ್ಷಣೆ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಮತ್ತೆ 11 ಮಂದಿಯನ್ನು ಶುಕ್ರವಾರ...
ಪ್ರವೀಣ್ ಪೂಜಾರಿ
ಪ್ರವೀಣ್ ಪೂಜಾರಿ
Updated on

ಉಡುಪಿ: ಗೋರಕ್ಷಣೆ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಮತ್ತೆ 11 ಮಂದಿಯನ್ನು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

ಕುಚ್ಚೂರಿನ ರಾಘವೇಂದ್ರ ಶೆಟ್ಟಿ (22), ಕೊಕ್ಕರ್ಣೆಯ ಗಣೇಶ್ ಮೊಗವೀರಾ (25), ಪ್ರದೀಪ್ ಆಚಾರಿ (20), ದಿನೇ ಮೊಗವೀರಾ (28), ಶಿವಪುರದ ಸಂದೀಪ್ ಶೆಟ್ಟಿ (19), ಹುಣಸೇಮಕ್ಕಿಯ ಪ್ರಕಾಶ್ ನಾಯಕ್ (36), ಸುಕುಮಾರ್ ಕುಲಾಲ್ (22), ಸುಕೇಶ್ ಆಚಾರ್ (32), ಪ್ರಕಾಶ್ ಆಚಾರ್ (30), ಶಾಂತರಾಮ್ ನಾಯಕ್ (21) ಮಂಜುನಾಥ್ (20) ಬಂಧಿತ ಆರೋಪಿಗಳೆಂದು ಗುರ್ತಿಸಲಾಗಿದೆ.

ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ ಸಂಬಂಧ ಈ ಹಿಂದೆಯೇ ಪೊಲೀಸರು 7 ಮಂದಿಯನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಅಪರಾಧ) 147 (ಗಲಭೆ ಶಿಕ್ಷೆ), 148 (ಮಾರಕ ಶಸ್ತ್ರಾಸ್ತರಗಳ ಬಳಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com