ಸತತ ಮೂರು ತಾಸು ಕರಡಿ ಜೊತೆ ಹೋರಾಡಿ ಪ್ರಾಣ ಉಳಿಸಿಕೊಂಡ ರೈತ

ತಮ್ಮ ಮೇಲೆ ದಾಳಿ ಮಾಡಿದ ಕರಡಿ ಜೊತೆ ಸುಮಾರು ತಾಸು ಹೋರಾಟ ಮಾಡಿದ ರೈತನೊಬ್ಬ ಅಪಾಯದಿಂದ ಪಾರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ...
ಕರಡಿ ಜೊತೆ ಹೋರಾಡಿ ಪ್ರಮಾ ಉಳಿಸಿಕೊಂಡ ರೈತ
ಕರಡಿ ಜೊತೆ ಹೋರಾಡಿ ಪ್ರಮಾ ಉಳಿಸಿಕೊಂಡ ರೈತ
Updated on

ಹಳಿಯಾಳ: ತಮ್ಮ ಮೇಲೆ ದಾಳಿ ಮಾಡಿದ ಕರಡಿ ಜೊತೆ ಸುಮಾರು ತಾಸು ಹೋರಾಟ ಮಾಡಿದ ರೈತನೊಬ್ಬ ಅಪಾಯದಿಂದ ಪಾರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ 58 ವರ್ಷದ ಜುಬೆ ವಾಲಂತಿ ಅಡವೆಪ್ಪಾಚೇ ಕರಡಿಯೊಂದಿಗೆ ಹೋರಾಡಿ ಜೀವ ಉಳಿಸಿಕೊಂಡವರು. ಗ್ರಾಮಕ್ಕೆ ಹೊಂದಿಕೊಂಡಿರುವ ಕಾಡಿನ ಮಧ್ಯದಲ್ಲಿ ಇದ್ದ ಜಮೀನಿಗೆ ಅಣಬೆ ತರಲು ಹೋಗಿದ್ದ ಜುಬೆ ಅವರ ಮೇಲೆ ಮರಿಗಳೊಂದಿಗೆ ಪೊದೆಯಲ್ಲಿ ಅವಿತು ಕುಳಿತಿದ್ದ ಕರಡಿ ದಾಳಿ ಮಾಡಿದೆ. ಇದರಿಂದ ಧೃತಿಗೆಡದೆ ಹೋರಾಟ ನಡೆಸಿದ ಅವರು, ಕೊನೆಗೂ ಕರಡಿಯನ್ನು ಓಡಿಸಿದ್ದಾರೆ.

ಕರಡಿಯ ದಾಳಿಗೆ ಸಿಲುಕಿದ ಅವರಿಗೆ ಕೈ, ಕಣ್ಣು ಮತ್ತು ತಲೆಗೆ ಗಾಯಗಳಾಗಿದ್ದು, ಅಂತಹ ಸ್ಥಿತಿಯಲ್ಲೇ 5 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮಕ್ಕೆ ಬಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸುಮಾರು 50 ಹೊಲಿಗೆ ಹಾಕಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಕಿಮ್ಸ್ ಆಸ್ಪತ್ರೆಗೆದಾಖಲಾಗಿರುವ ಜುಬೆ ಅವರನ್ನು ಸ್ಥಳೀಯ ಅರಣ್ಯಾಧಿಕಾರಿಗಳು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com