ಬೆಂಗಳೂರು: ಮಗುವಿನ ಚಿಕಿತ್ಸೆಗಾಗಿ ಮಾಡಿದ ಸಾಲ ತೀರಿಸಲಾಗದೇ ತಾಯಿ ಮಗ ಆತ್ಮಹತ್ಯೆ

ಮಾಡಿದ ಸಾಲ ತೀರಿಸಲಾಗದೇ ತಾಯಿ ಮತ್ತು ಮಗ ಒಂದೇ ಕುಣಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಾಡಿದ ಸಾಲ ತೀರಿಸಲಾಗದೇ ತಾಯಿ ಮತ್ತು ಮಗ ಒಂದೇ ಕುಣಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ನಾಗರಬಾವಿ ಸಮೀಪದ ಹೆಗ್ಗಡೆಬಾವಿ ಪಾರ್ಕ್ 2ನೇ ಕ್ರಾಸ್‌ನ ಪದ್ಮಾವತಿ ಮತ್ತು ಆಕೆಯ ಪುತ್ರ ಯೋಗಾನಂದ ಮೃತ ದುರ್ದೈವಿಗಳು.

ಯೋಗಾನಂದ  ಮಾವನ ಮಗಳು ಲಕ್ಷ್ಮಿ ಅವರನ್ನೇ ಮದುವೆಯಾಗಿದ್ದ. ಮಾಳಗಾಳದಲ್ಲಿ ಫೋಟೊ ಸ್ಟುಡಿಯೊ ಇಟ್ಟುಕೊಂಡಿದ್ದರು.ಅವರ ಮಗುವಿನ  ಅನ್ನನಾಳದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹಲವು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದರು. ಕಳೆದ ತಿಂಗಳು ಸಮಸ್ಯೆ ಹೆಚ್ಚಾಗಿದ್ದರಿಂದ  ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು.

ಅದಕ್ಕಾಗಿ ಸುಮಾರು 20 ಲಕ್ಷ  ಸಾಲ ಮಾಡಿಕೊಂಡಿದ್ದರು ಜತೆಗೆ ವೃತ್ತಿಯಲ್ಲಿ ನಷ್ಟ ಉಂಟಾಗಿದ್ದರಿಂದ ಕೆಲ ತಿಂಗಳ ಹಿಂದಷ್ಟೇ ಸ್ಟುಡಿಯೊ ಬಂದ್‌ ಮಾಡಿದ್ದ ಯೋಗಾನಂದ ಮನೆಯಲ್ಲೇ ಉಳಿದುಕೊಂಡಿದ್ದರು.  ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯೋಗಾನಂದ, ತಮ್ಮ ಪತ್ನಿ ಹಾಗೂ ಮಗುವನ್ನು ಯಲಹಂಕದಲ್ಲಿದ್ದ ಆಕೆಯ ತವರುಮನೆಗೆ ಕಳುಹಿಸಿದ್ದರು. ತಾಯಿ ಮಾತ್ರ ಮನೆಯಲ್ಲಿದ್ದರು.

ಯೋಗಾನಂದನ ಮಾವ ಆತನಿಗೆ ಸತತವಾಗಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆಗೆ ಬಂದು ಬಾಗಿಲು ತಟ್ಟಿದ್ದಾರೆ. ಬಾಗಿಲು ತೆರೆಯದೇ ಇದ್ದರಿಂದ ಅನುಮಾನಗೊಂಡ ಅವರು ಕಿಟಕಿ ತೆರೆದಿದ್ದಾರೆ. ಅಲ್ಲಿ ಒಂದೇ ಕುಣಿಕೆಯಲ್ಲಿ ತಾಯಿ ಮಗ ಇಬ್ಬರ ನೇಣು ಹಾಕಿಕೊಂಡಿರುವುದು ತಿಳಿದು ಬಂದಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ, ಸಾಲದ ಹಣ ವಾಪಸ್ ಮಾಡುವಂತೆ ಯಾರಾದರೂ ಕಿರುಕುಳ ನೀಡುತ್ತಿದ್ದರೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com