ಕಿರುಕುಳ ಆರೋಪ ತಳ್ಳಿ ಹಾಕಿದ ಪ್ರಣಬ್ ಮೊಹಾಂತಿ ಆಪ್ತರು

ನೀಡುತ್ತಿದ್ದರು ಎಂಬ ಡಿವೈಎಸ್ಪಿ ಗಣಪತಿಯವರ ಆರೋಪವನ್ನು ಐಜಿಪಿ ಪ್ರಣಬ್ ಮೊಹಾಂತಿಯವರ ಆಪ್ತರು ಶುಕ್ರವಾರ ತಿರಸ್ಕರಿಸಿದ್ದಾರೆ...
ಡಿವೈಎಸ್ಪಿ ಗಣಪತಿ
ಡಿವೈಎಸ್ಪಿ ಗಣಪತಿ
Updated on

ಬೆಂಗಳೂರು: ಕಿರುಕುಳ ನೀಡುತ್ತಿದ್ದರು ಎಂಬ ಡಿವೈಎಸ್ಪಿ ಗಣಪತಿಯವರ ಆರೋಪವನ್ನು ಐಜಿಪಿ ಪ್ರಣಬ್ ಮೊಹಾಂತಿಯವರ ಆಪ್ತರು ಶುಕ್ರವಾರ ತಿರಸ್ಕರಿಸಿದ್ದಾರೆ.

ಮೊಹಾಂತಿ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಗಣಪತಿಯವರು ನನ್ನ ಅಡಿಯಲ್ಲಿ ಅಥವಾ ನನ್ನ ಜೊತೆಗೆ ಕೆಲಸ ಮಾಡುತ್ತಿರಲಿಲ್ಲ. ಅವರ ವಿರುದ್ಧ ಸಲ್ಲಿಸಲಾಗಿದ್ದ ವರದಿಯಿಂದಾಗಿ ಅವರನ್ನು ಅಮಾನತು ಮಾಡಲಾಗಿತ್ತು.

ಮೊಹಾಂತಿಯವರು (ಅಪರಾಧ) ಹೆಚ್ಚುವರಿ ಆಯುಕ್ತರಾಗಿದ್ದ ಸಂದರ್ಭದಲ್ಲಿ ಗಣಪತಿಯವರು ರಾಜಗೊಪಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 2011 ರಲ್ಲಿ ಜಂಟಿ ಆಯುಕ್ತರಾಗಿ (ಪಶ್ಚಿಮ ವಿಭಾಗ) ಅಧಿಕಾರಕ್ಕೆ ಬಂದಾಗ ಗಣಪತಿಯವರು ಮಡಿವಾಳ (ಆಗ್ನೇಯ) ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನು ಗಮನಿಸಿದರೆ, ಮೊಹಾಂತಿ ಗಣಪತಿಯವರಿಗೆ ಕಿರುಕುಳ ನೀಡುತ್ತಿದ್ದರು ಎಂಬ ಪ್ರಶ್ನೆಯೇ ಬರುವುದಿಲ್ಲ. ಮೊಹಾಂತಿ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು. ಆರೋಪಗಳಿಗೆ ಒಂದಕ್ಕೊಂದು ಸಂಬಂಧವೇ ಇಲ್ಲ. ಆರೋಪ ಸಂಬಂಧ ಸಾಕ್ಷಿಗಳೇನಾದರೂ ಇದ್ದರೆ ತೋರಿಸಲಿ ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com