ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ಅನುಪಮಾ ಶೆಣೈ ಪ್ರತಿಕ್ರಿಯೆ ನೀಡಲು ನಿರಾಕರಣೆ

ಸರ್ಕಾರದ ವಿರುದ್ಧ ಸಿಡಿದೆದ್ದು, ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದ ಮಾಜಿ ಡಿವೈಎಸ್ಪಿ ಅನುಪಮಾ ಅವರು ಕಿರುಕುಳ ಪ್ರಕರಣ ಕುರಿತಂತೆ...
ಮಾಜಿ ಡಿವೈಎಸ್ಪಿ ಅನುಪಮಾ
ಮಾಜಿ ಡಿವೈಎಸ್ಪಿ ಅನುಪಮಾ
Updated on

ಧಾರವಾಡ: ಸರ್ಕಾರದ ವಿರುದ್ಧ ಸಿಡಿದೆದ್ದು, ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದ ಮಾಜಿ ಡಿವೈಎಸ್ಪಿ ಅನುಪಮಾ ಅವರು ಕಿರುಕುಳ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಲು ಭಾನುವಾರ ನಿರಾಕರಿಸಿದ್ದಾರೆ.

ನಿನ್ನೆ ಧಾರವಾಡದಲ್ಲಿ ನಡೆಯುತ್ತಿದ್ದ ಜನಪರ್ಯಾಯ ಚಿಂತನ ಸಮಾರಂಭದಲ್ಲಿ ಅನುಪಮಾ ಶೆಣೈ ಅವರು ಹಾಜರಿದ್ದರು. ಈ ವೇಳೆ ಶೆಣೈ ಅವರನ್ನು ನೋಡಿದ ಮಾಧ್ಯಮದವರು ಪ್ರಕರಣದ ಕುರಿತಂತೆ ಪ್ರತಿಕ್ರಿಯೆ ಪಡೆಯಲು ಅವರ ಬಳಿ ತೆರಳಿದ್ದರು.

ಕೂಡಲೇ ಎದ್ದು ನಿಂತ ಶೆಣೈ ಅವರು, ಈಗಾಗಲೇ ಇಲಾಖೆಯನ್ನು ಬಿಟ್ಟಾಗಿದೆ. ಈ ಹಿಂದೆ ಏನೇ ಆಗಿದ್ದರೂ ಅದೆಲ್ಲ ಮುಗಿದ ಅಧ್ಯಾಯ ಎಂದರು.

ಮತ್ತೆ ಮಾಧ್ಯಮದವರು ಕೆಲ ಪ್ರಶ್ನೆಗಳನ್ನು ಕೇಳಲು ಆರಂಭಿಸಿದಾಗ, ಹೀಗೆ ಪ್ರಶ್ನೆ ಕೇಳುತ್ತಿದ್ದರೆ ಕಾರ್ಯಕ್ರಮ ಸ್ಥಳವನ್ನು ಬಿಟ್ಟು ತೊರೆಯುವುದಾಗಿ ಹೇಳಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com