ಧಾರವಾಡ: ಸರ್ಕಾರದ ವಿರುದ್ಧ ಸಿಡಿದೆದ್ದು, ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದ ಮಾಜಿ ಡಿವೈಎಸ್ಪಿ ಅನುಪಮಾ ಅವರು ಕಿರುಕುಳ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಲು ಭಾನುವಾರ ನಿರಾಕರಿಸಿದ್ದಾರೆ.
ನಿನ್ನೆ ಧಾರವಾಡದಲ್ಲಿ ನಡೆಯುತ್ತಿದ್ದ ಜನಪರ್ಯಾಯ ಚಿಂತನ ಸಮಾರಂಭದಲ್ಲಿ ಅನುಪಮಾ ಶೆಣೈ ಅವರು ಹಾಜರಿದ್ದರು. ಈ ವೇಳೆ ಶೆಣೈ ಅವರನ್ನು ನೋಡಿದ ಮಾಧ್ಯಮದವರು ಪ್ರಕರಣದ ಕುರಿತಂತೆ ಪ್ರತಿಕ್ರಿಯೆ ಪಡೆಯಲು ಅವರ ಬಳಿ ತೆರಳಿದ್ದರು.
ಕೂಡಲೇ ಎದ್ದು ನಿಂತ ಶೆಣೈ ಅವರು, ಈಗಾಗಲೇ ಇಲಾಖೆಯನ್ನು ಬಿಟ್ಟಾಗಿದೆ. ಈ ಹಿಂದೆ ಏನೇ ಆಗಿದ್ದರೂ ಅದೆಲ್ಲ ಮುಗಿದ ಅಧ್ಯಾಯ ಎಂದರು.
ಮತ್ತೆ ಮಾಧ್ಯಮದವರು ಕೆಲ ಪ್ರಶ್ನೆಗಳನ್ನು ಕೇಳಲು ಆರಂಭಿಸಿದಾಗ, ಹೀಗೆ ಪ್ರಶ್ನೆ ಕೇಳುತ್ತಿದ್ದರೆ ಕಾರ್ಯಕ್ರಮ ಸ್ಥಳವನ್ನು ಬಿಟ್ಟು ತೊರೆಯುವುದಾಗಿ ಹೇಳಿದ್ದಾರೆಂದು ತಿಳಿದುಬಂದಿದೆ.
Advertisement